ADVERTISEMENT

ಕೆಎಸ್‌ಸಿಎ ಅಂತರವಲಯ ಕ್ರಿಕೆಟ್‌ ಟೂರ್ನಿ: ಧಾರವಾಡ, ಮೈಸೂರು ತಂಡಗಳಿಗೆ ಗೆಲುವು

ಕೆಎಸ್‌ಸಿಎ ಅಂತರವಲಯ 19 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 15:26 IST
Last Updated 15 ಫೆಬ್ರುವರಿ 2021, 15:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ವೈಭವ್ ಕುರಿಬಾಗಿ (23ಕ್ಕೆ 5) ಗಳಿಸಿದ ಐದು ವಿಕೆಟ್‌ ಹಾಗೂ ಚಿರಾಗ್ ಆರ್‌. ನಾಯಕ್‌ ಅರ್ಧಶತಕದ (ಔಟಾಗದೆ 79) ಬಲದಿಂದ ಧಾರವಾಡ ತಂಡವು ಜಯಿಸಿತು. ಇಲ್ಲಿ ನಡೆಯುತ್ತಿರುವ ಅಂತರವಲಯ (ಮೋಫುಶಿಲ್‌) 19 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯಲ್ಲಿ ಸೋಮವಾರ ಮಂಗಳೂರು ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು.

ಸಂಕ್ಷಿಪ್ತ ಸ್ಕೋರುಗಳು: ಗ್ರೀನ್‌ ಸ್ಪೋರ್ಟ್ಸ್ ವಿಲೇಜ್ ಕ್ರೀಡಾಂಗಣ: ಮಂಗಳೂರು ವಲಯ: 32.1 ಓವರ್‌ಗಳಲ್ಲಿ 144 (ತೋಟಾ ಮೊಹಮ್ಮದ್ 41, ಹರ್ಷಿತ್ವ ಶೆಟ್ಟಿ 20; ಸಯಾಮ್‌ ಅಪ್ಪಣ್ಣವರ 48ಕ್ಕೆ2, ವೈಭವ್ ಕುರಿಬಾಗಿ 23ಕ್ಕೆ 5, ಆಕಾಶ್‌ ಅಸಲಕರ್‌ 28ಕ್ಕೆ 2). ಧಾರವಾಡ ವಲಯ: 32 ಓವರ್‌ಗಳಲ್ಲಿ 2 ವಿಕೆಟ್‌ಗೆ 145 (ಸಫಲ್ ಶೆಟ್ಟಿ ಔಟಾಗದೆ 30, ಚಿರಾಗ್ ಆರ್‌.ನಾಯಕ್‌ ಔಟಾಗದೆ 79). ಫಲಿತಾಂಶ: ಧಾರವಾಡ ತಂಡಕ್ಕೆ 8 ವಿಕೆಟ್‌ಗಳ ಗೆಲುವು.

ಐಎಎಫ್‌ ಕ್ರೀಡಾಂಗಣ: ಮೈಸೂರು ವಲಯ: 47.1 ಓವರ್‌ಗಳಲ್ಲಿ 187 (ಮನ್ವಂತ್ ಕುಮಾರ್‌ ಎಲ್‌. 31, ಆರ್ಯನ್ ಕಾವೇರಿಯಪ್ಪ ಸಿ.ಎಸ್‌. 36, ಸುಪ್ರೀತ್ ಎಸ್‌. 83; ಪ್ರತೀಕ್ ಎಸ್‌.ಎಂ. 31ಕ್ಕೆ 2, ರಿಷಭ್ ಡಿ.ಎ. 27ಕ್ಕೆ 2, ಸಾಯಿ ಶ್ರೇತನ್ ಜೆ.ಜಿ. 34ಕ್ಕೆ 3, ಶ್ರೀಸ್ ಅಲಿ 36ಕ್ಕೆ 2). ಶಿವಮೊಗ್ಗ ವಲಯ: 35.4 ಓವರ್‌ಗಳಲ್ಲಿ 120 (ಶ್ರೇಯಸ್ ಬಾಬು 26, ರಾಹುಲ್ ಕಾಮತ್ 38; ಮನ್ವಂತ್ ಕುಮಾರ್‌ ಎಲ್‌. 25ಕ್ಕೆ 2, ಅಭಿನಂದನ್‌ ಜಿ.ಆರ್‌. 20ಕ್ಕೆ 2, ಅಭಿನಾಮ್‌ ಜಿ.ಜಾಕಬ್‌ 28ಕ್ಕೆ 4). ಫಲಿತಾಂಶ: ಮೈಸೂರು ತಂಡಕ್ಕೆ 67 ರನ್‌ಗಳ ಜಯ.

ADVERTISEMENT

ಆರ್‌ಎಸ್‌ಐ ಕ್ರೀಡಾಂಗಣ: ತುಮಕೂರು ವಲಯ: 49.4 ಓವರ್‌ಗಳಲ್ಲಿ 147 (ಟಿ. ಚಿರಂಜೀವಿ 40, ಹೇಮಂತ್ ಕುಮಾರ್ 38; ಮರಿಬಸವಗೌಡ 38ಕ್ಕೆ 2, ಭೀಮರಾವ್‌ 19ಕ್ಕೆ 2, ಮೊಹಮ್ಮದ್ ಅತ್ತಾರ್‌ ಹುಸೇನ್‌ 22ಕ್ಕೆ 2). ರಾಯಚೂರು ವಲಯ: 42 ಓವರ್‌ಗಳಲ್ಲಿ 5 ವಿಕೆಟ್‌ಗೆ 148 (ವಿಜಯ ರಾಜ್‌ ಬಿ. 57, ತಿಪ್ಪಾರೆಡ್ಡಿ 24, ಶ್ರೇಯಸ್ ಎಸ್.ಪಿ. 21, ವಿಜಯ ರೆಡ್ಡಿ ಔಟಾಗದೆ 29; ಸಂಜಯ್ ಎಂ.ತಪ್ಪಳ 28ಕ್ಕೆ 2). ಫಲಿತಾಂಶ: ರಾಯಚೂರು ತಂಡಕ್ಕೆ 5 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.