ADVERTISEMENT

Duleep Trophy Final | ಪಶ್ಚಿಮ ವಲಯಕ್ಕೆ 298 ರನ್ ಗುರಿ; ಕುತೂಹಲ ಘಟ್ಟದಲ್ಲಿ ಪಂದ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜುಲೈ 2023, 7:43 IST
Last Updated 15 ಜುಲೈ 2023, 7:43 IST
ಬೆಂಗಳೂರಿನಲ್ಲಿ ನಡೆಯುತ್ತಿರುವ ದುಲೀಪ್‌ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿಕೆಟ್ ಗಳಿಸಿದ ಸಂಭ್ರಮದಲ್ಲಿ ದಕ್ಷಿಣ ವಲಯದ ವಿದ್ವತ್ ಕಾವೇರಪ್ಪ
ಬೆಂಗಳೂರಿನಲ್ಲಿ ನಡೆಯುತ್ತಿರುವ ದುಲೀಪ್‌ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿಕೆಟ್ ಗಳಿಸಿದ ಸಂಭ್ರಮದಲ್ಲಿ ದಕ್ಷಿಣ ವಲಯದ ವಿದ್ವತ್ ಕಾವೇರಪ್ಪ   ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್‌ ಪಂದ್ಯದಲ್ಲಿ ದಕ್ಷಿಣ ವಲಯ ಕ್ರಿಕೆಟ್‌ ತಂಡವು ಪಶ್ಚಿಮ ವಲಯ ಗೆಲುವಿಗೆ 298 ರನ್‌ ಗುರಿ ನೀಡಿದೆ.

ಬುಧವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ವಲಯ ಮೊದಲ ಇನಿಂಗ್ಸ್‌ನಲ್ಲಿ 213 ರನ್‌ ಗಳಿಸಿ ಆಲೌಟ್‌ ಆಗಿತ್ತು. ಈ ಮೊತ್ತದೆದುರು ಪಶ್ಚಿಮ ವಲಯ 146 ರನ್‌ ಗಳಿಸುವಷ್ಟರಲ್ಲೇ ಸರ್ವಪತನ ಕಂಡಿದೆ.

ಬಳಿಕ ಎರಡನೇ ಇನಿಂಗ್ಸ್‌ ಆರಂಭಿಸಿದ ದಕ್ಷಿಣ ವಲಯ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 230 ರನ್‌ ಗಳಿಸಿತ್ತು. ಈ ತಂಡದ ಪರ ನಾಯಕ ಹನುಮ ವಿಹಾರಿ 42 ರನ್ ಗಳಿಸಿದರೆ, ಪಶ್ಚಿಮ ವಲಯ ಪರ ಧರ್ಮೇಂದ್ರಸಿನ್ಹಾ ಜಡೇಜ ಐದು ವಿಕೆಟ್ ಕಿತ್ತು ಮಿಂಚಿದರು.

ADVERTISEMENT

ಸದ್ಯ ಸವಾಲಿನ ಗುರಿ ಬೆನ್ನತ್ತಿರುವ ಪಶ್ಚಿವ ವಲಯ 19 ರನ್ ಗಸುವಷ್ಟರಲ್ಲಿ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದ ಪೃಥ್ವಿ ಶಾ ಈ ಬಾರಿ ಕೇವಲ 7 ರನ್ ಹಾಗೂ ಹಾರ್ವಿಕ್‌ ದೇಸಾಯಿ 4 ಗಳಿಸಿ ಪೆವಿಲಿಯನ್‌ ಸೇರಿಕೊಂಡಿದ್ದಾರೆ. ಸದ್ಯ 6 ರನ್ ಗಳಿಸಿರುವ ನಾಯಕ ಪ್ರಿಯಾಂಕ್‌ ಪಾಂಚಾಲ್‌ ಹಾಗೂ ಇನ್ನೂ ಖಾತೆ ತೆರೆಯದ ಅನುಭವಿ ಚೇತೇಶ್ವರ ‌ಪೂಜಾರ ಕ್ರೀಸ್‌ನಲ್ಲಿದ್ದು, ಪಂದ್ಯ ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.