ಬೆಂಗಳೂರು: ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್ಗಳನ್ನು ಕಂಗೆಡಿಸುವ ಆಟಗಾರ್ತಿ, ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್. ಅವರು ಇತ್ತೀಚೆಗೆ ತೋರಿಸಿದ ಮಾನವೀಯ ಕಾರ್ಯವನ್ನು ಜನರು ಶ್ಲಾಘಿಸಿದ್ದಾರೆ.
ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಪಾಕಿಸ್ತಾನ ಎದುರಿನ ಪಂದ್ಯಕ್ಕೂ ಮೊದಲು ಈ ಘಟನೆ ನಡೆದಿತ್ತು. ಭಾನುವಾರ ನಡೆದ ಈ ಪಂದ್ಯದಲ್ಲಿ ಆಟಗಾರ್ತಿಯರನ್ನು ಅಂಗಳಕ್ಕೆ ಕರೆತರುವ ಬಾಲಕಿಯರ ಪೈಕಿ ಒಬ್ಬಾಕೆ ರಾಷ್ಟ್ರಗೀತೆ ಹಾಡಿ ಮುಗಿದ ಕೂಡಲೇ ಕುಸಿದು ಬಿದ್ದಳು. ಇದನ್ನು ಗಮನಿಸಿದ ಹರ್ಮನ್ಪ್ರೀತ್ ಕೌರ್ ತಕ್ಷಣ ಆ ಬಾಲೆಯನ್ನು ಎತ್ತಿಕೊಂಡು ಓಡಿದರು. ನಂತರ ಸಂಬಂಧಪಟ್ಟ ಅಧಿಕಾರಿಗಳ ಕೈಗಿತ್ತರು. ಹೀಗಾಗಿ ಆಕೆಗೆ ಶೀಘ್ರ ಚಿಕಿತ್ಸೆ ಸಿಗುವಂತಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.