ಶಾರ್ಜಾ: ಯುವ ಆಟಗಾರರಿಗೆ ಅಮೂಲ್ಯ ಸಲಹೆಗಳನ್ನು ಕೊಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಗಮನ ಸೆಳೆದಿದ್ದಾರೆ.
ಐಪಿಎಲ್ನಲ್ಲಿ ಬುಧವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್ಸಿಬಿ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿತ್ತು.
ಪಂದ್ಯದ ಬಳಿಕ ರಾಜಸ್ಥಾನ್ ಯುವ ಆಟಗಾರರಿಗೆ ಕೊಹ್ಲಿ ಸಲಹೆಗಳನ್ನು ಕೊಡುತ್ತಿರುವ ದೃಶ್ಯ ಕಂಡುಬಂತು. ಇದು ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವಿರಾಟ್ ಕೊಹ್ಲಿ ಅವರನ್ನು ಅಭಿಮಾನಿಗಳು ಕೊಡಾಂಡಿದ್ದಾರೆ.
ಅಂದ ಹಾಗೆ ವಿರಾಟ್ ಇದು ಮೊದಲ ಬಾರಿಯೇನಲ್ಲ ಆಟಗಾರರಿಗೆ ನೆರವಾಗುತ್ತಿರುವುದು. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದ ಬಳಿಕ ಹತಾಶರಾಗಿದ್ದ ಇಶಾನ್ ಕಿಶನ್ಗೆ ಧೈರ್ಯ ತುಂಬಿದ್ದರು.
ಈ ಮೂಲಕ ಮಹೇಂದ್ರ ಸಿಂಗ್ ಧೋನಿ ಅವರ ಅದೇ ನಡೆಯನ್ನು ಅನುಸರಿಸುತ್ತಿದ್ದು, ತಮ್ಮ ಅನುಭವ ಸಂಪತ್ತನ್ನು ಧಾರೆಯೆಳೆಯುವ ಮೂಲಕ ಭವಿಷ್ಯದ ಭಾರತ ತಂಡ ಕಟ್ಟಲು ನೆರವಾಗುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.