ADVERTISEMENT

ರಣಜಿ ಟ್ರೋಫಿ 'ಚಾಂಪಿಯನ್' ಕೋಚ್ ಪಂಡಿತ್ ಕೆಕೆಆರ್ ತರಬೇತುದಾರಾಗಿ ನೇಮಕ

ಪಿಟಿಐ
Published 17 ಆಗಸ್ಟ್ 2022, 21:21 IST
Last Updated 17 ಆಗಸ್ಟ್ 2022, 21:21 IST
   

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ಆಡುವ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ತಂಡವು ಚಂದ್ರಕಾಂತ್ ಪಂಡಿತ್ ಅವರನ್ನು ಕೋಚ್ ಆಗಿ ನೇಮಿಸಿಕೊಂಡಿದೆ.

ಈ ಹಿಂದೆ ಕೋಚ್‌ ಆಗಿದ್ದ ಬ್ರೆಂಡನ್‌ ಮೆಕಲಂ, ಇಂಗ್ಲೆಂಡ್‌ ಟೆಸ್ಟ್‌ ತಂಡಕ್ಕೆ ನೇಮಕವಾದ ಕಾರಣ ಅವರ ಸ್ಥಾನಕ್ಕೆ ಚಂದ್ರಕಾಂತ್‌ ಅವರನ್ನು ನೇಮಿಸಲಾಗಿದೆ.

ಚಂದ್ರಕಾಂತ್ ತರಬೇತಿಯಲ್ಲಿ ಇತ್ತೀಚೆಗೆ ಮಧ್ಯಪ್ರದೇಶ ತಂಡವು ರಣಜಿ ಟ್ರೋಫಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.