ADVERTISEMENT

ರಣಜಿ ಟ್ರೋಫಿ 'ಚಾಂಪಿಯನ್' ಕೋಚ್ ಪಂಡಿತ್ ಕೆಕೆಆರ್ ತರಬೇತುದಾರಾಗಿ ನೇಮಕ

ಪಿಟಿಐ
Published 17 ಆಗಸ್ಟ್ 2022, 21:21 IST
Last Updated 17 ಆಗಸ್ಟ್ 2022, 21:21 IST
   

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ಆಡುವ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ತಂಡವು ಚಂದ್ರಕಾಂತ್ ಪಂಡಿತ್ ಅವರನ್ನು ಕೋಚ್ ಆಗಿ ನೇಮಿಸಿಕೊಂಡಿದೆ.

ಈ ಹಿಂದೆ ಕೋಚ್‌ ಆಗಿದ್ದ ಬ್ರೆಂಡನ್‌ ಮೆಕಲಂ, ಇಂಗ್ಲೆಂಡ್‌ ಟೆಸ್ಟ್‌ ತಂಡಕ್ಕೆ ನೇಮಕವಾದ ಕಾರಣ ಅವರ ಸ್ಥಾನಕ್ಕೆ ಚಂದ್ರಕಾಂತ್‌ ಅವರನ್ನು ನೇಮಿಸಲಾಗಿದೆ.

ಚಂದ್ರಕಾಂತ್ ತರಬೇತಿಯಲ್ಲಿ ಇತ್ತೀಚೆಗೆ ಮಧ್ಯಪ್ರದೇಶ ತಂಡವು ರಣಜಿ ಟ್ರೋಫಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.