ಹೈದರಾಬಾದ್: ‘ನಾನು ಪಯಣಿಸುತ್ತಿದ್ದ ಕಾರು ಬುಧವಾರ ಅಪಘಾತಕ್ಕೀಡಾಯಿತು. ಅಲ್ಲಾಹುವಿನ ಕೃಪೆಯಿಂದ ಯಾರಿಗೂ ಪ್ರಾಣಾಪಾಯವಾಗಿಲ್ಲ. ಧನ್ಯವಾದಗಳು’ ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಮೊಹಮ್ಮದ್ ಅಜರುದ್ಧೀನ್ ಟ್ವೀಟ್ ಮಾಡಿದ್ದಾರೆ.
ರಾಜಸ್ಥಾನದ ರಣಥಂಬೋರ್ ಸಮೀಪ ಅವರು ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಅದರಲ್ಲಿ ಅಜರ್ ಜೊತೆಗೆ ಇನ್ನೂ ಮೂವರು ವ್ಯಕ್ತಿಗಳಿದ್ದರು. ಕಾರು ಪಲ್ಟಿಯಾಗುವ ಮುನ್ನ ರಸ್ತೆ ಬದಿಯ ಹೋಟೆಲ್ಗೂ ಡಿಕ್ಕಿಯಾಗಿತ್ತೆನ್ನಲಾಗಿದೆ. ಅಜರ್, ಸಹಪ್ರಯಾಣಿಕರು ಮತ್ತು ಅಂಗಡಿಯಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ನಂತರ ಎಲ್ಲರೂ ಮನೆಗೆ ತೆರಳಿದರು. ಅಜರುದ್ದೀನ್ ಅವರು ಇನ್ನೊಂದು ವಾಹನದಲ್ಲಿ ಪ್ರಯಾಣ ಬೆಳೆಸಿದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.