ಕೋಲ್ಕತ್ತ:ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಲಗೇಜ್ಅನ್ನು ಮತ್ತೊಬ್ಬ ಪ್ರಯಾಣಿಕ ತೆಗೆದುಕೊಂಡು ಹೋಗಿರುವ ಘಟನೆ ಇಲ್ಲಿನನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ತಡವಾಗಿ ವರದಿಯಾಗಿದೆ.
ಧೋನಿ ಸೋಮವಾರ ನಗರಕ್ಕೆ ಬಂದರು. ದೆಹಲಿಯಿಂದ ಹೊರಡುವ ಸಂದರ್ಭದಲ್ಲಿ ಅವರು ಸರಕು ಸಾಗಾಣೆ ವಿಭಾಗದಲ್ಲಿ ನೋಂದಣಿ ಮಾಡಿಕೊಳ್ಳುವಾಗ ಮತ್ತೊಬ್ಬರೂ ಅಲ್ಲಿದ್ದರು. ಆಗ ಧೋನಿ ಲಗೇಜ್ ಆ ಪ್ರಯಾಣಿಕನ ಹೆಸರಿನೊಂದಿಗೆ ನೋಂದಣಿಯಾಗಿದೆ. ಹೀಗಾಗಿ ಈ ಪ್ರಹಸನ ನಡೆದಿದೆ.ಆದರೆ, ಈ ವಿಚಾರ ಕೋಲ್ಕತ್ತಗೆ ಬಂದಿಳಿದ ಬಳಿಕ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.
ಯಾವುದೇ ಹಾನಿಯಿಲ್ಲ:ವಿಮಾನಯಾನ ಸಂಸ್ಥೆ
ಧೋನಿ ಅವರು ಕೋಲ್ಕತ್ತ ನಿಲ್ದಾಣದಿಂದ ಹೊರಡುವಾಗ ಆಕಸ್ಮಿಕವಾಗಿ ಲಗೇಜ್ ವಿನಿಮಯವಾಗಿದೆ ಎಂದು ಹೇಳಿರುವ ವಿಮಾನಯಾನ ಸಂಸ್ಥೆ ಲಗೇಜ್ಗೆ ಯಾವುದೇ ಹಾನಿಯಾಗದು ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಸಿಬ್ಬಂದಿಯ ಕಣ್ತಪ್ಪಿನಿಂದಾಗಿ ಅಪರೂಪವೆಂಬಂತೆ ಈ ಘಟನೆ ನಡೆದಿರುವುದು ದುರದೃಷ್ಟಕರ. ಧೋನಿ ಅವರ ಲಗೇಜ್ ತೆಗೆದುಕೊಂಡು ಹೋಗಿರುವ ಪ್ರಯಾಣಿಕನಿಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅವರಿಂದ ಲಗೇಜ್ ಪಡೆದು, ಕ್ರಿಕೆಟಿಗ ಧೋನಿಗೆ ಇಂದು ಅದನ್ನು ತಲುಪಿಸಲಾಗುವುದು ಎಂದು ಭರವಸೆ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.