ADVERTISEMENT

ರಣಜಿ ಪಂದ್ಯ: ಕರ್ನಾಟಕ – ಮುಂಬೈ ಪಂದ್ಯಕ್ಕೆ ಉಚಿತ ಪ್ರವೇಶ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 16:56 IST
Last Updated 17 ನವೆಂಬರ್ 2018, 16:56 IST

ಬೆಳಗಾವಿ: ಇಲ್ಲಿನ ಕೆಎಸ್‌ಸಿಎ ಮೈದಾನದಲ್ಲಿ ಇದೇ 20ರಿಂದ ಕರ್ನಾಟಕ ಹಾಗೂ ಮುಂಬೈ ತಂಡಗಳ ನಡುವೆ ರಣಜಿ ಟ್ರೋಫಿ ಕ್ರಿಕೆಟ್‌ ಎಲೀಟ್ ‘ಎ’ ಗುಂಪಿನ ಪಂದ್ಯ ನಡೆಯಲಿದೆ ಎಂದು ರಾಜ್ಯ ಕ್ರಿಕೆಟ್‌ ಸಂಸ್ಥೆಯ ಸದಸ್ಯ ಅವಿನಾಶ ಪೋತದಾರ ಶನಿವಾರ ತಿಳಿಸಿದರು.

‘ಈ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ರಣಜಿ ಪಂದ್ಯ ಇದಾಗಿದೆ. ಕರ್ನಾಟಕ ತಂಡ ಮೊದಲ ಬಾರಿ ಇಲ್ಲಿ ಆಡಲಿದೆ. ಎರಡೂ ತಂಡದ ಆಟಗಾರರು ಈಗಾಗಲೇ ಬೆಳಗಾವಿಗೆ ಬಂದಿದ್ದಾರೆ. ಪಂದ್ಯ ವೀಕ್ಷಿಸಲು ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗುವುದು. ಡಿಜಿಟಲ್‌ ಸ್ಕೋರ್‌ ಬೋರ್ಡ್‌ ಅಳವಡಿಸಲಾಗಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT