ಹುಬ್ಬಳ್ಳಿ: ದುರ್ಗಾ ಸ್ಪೋರ್ಟ್ಸ್ ಕ್ರಿಕೆಟ್ ಅಕಾಡೆಮಿ ಉದ್ಘಾಟಿಸುವ ಸಲುವಾಗಿ ಶುಕ್ರವಾರ ಇಲ್ಲಿಗೆ ಬಂದಿದ್ದ ಭಾರತ ಕ್ರಿಕೆಟ್ ತಂಡದ ಉಪನಾಯಕ ರೋಹಿತ್ ಶರ್ಮಾ ಇದ್ದ ಕೆಲ ನಿಮಿಷಗಳಲ್ಲಿಯೇ ಮೋಡಿ ಮಾಡಿದರು.
ರೋಹಿತ್ ಬರುವ ವಿಷಯ ತಿಳಿದು ಅಕಾಡೆಮಿಯ ಮುಂದೆ ನೂರಾರು ಯುವ ಕ್ರಿಕೆಟಿಗರು ನೆರೆದಿದ್ದರು. ಅವರು ರೋಹಿತ್.... ರೋಹಿತ್.... ಎಂದು ಕೂಗಿ ಸಂಭ್ರಮಿಸಿದರು.
ಅಕಾಡೆಮಿ ಉದ್ಘಾಟಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರೋಹಿತ್,‘ಭಾರತದ ಕ್ರಿಕೆಟ್ಗೆ ಕರ್ನಾಟಕ ಅಪಾರ ಕೊಡುಗೆ ನೀಡಿದೆ. ಎಲ್ಲ ಊರುಗಳಲ್ಲಿಯೂ ಕ್ರಿಕೆಟ್ ಅಕಾಡೆಮಿಗಳು ಆರಂಭವಾಗುತ್ತಿರುವ ಕಾರಣ ರಾಜ್ಯದಲ್ಲಿ ಕ್ರಿಕೆಟ್ ವೇಗವಾಗಿ ಬೆಳೆಯುತ್ತಿದೆ. ಮೊದಲ ಬಾರಿಗೆ ಹುಬ್ಬಳ್ಳಿಗೆ ಬಂದಿದ್ದೇನೆ. ಇದರಿಂದ ತುಂಬಾ ಖುಷಿಯಾಗಿದೆ’ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.