
ಬೆಂಗಳೂರು: ಬಿ.ಆರ್.ಗೌರವ್ ಮತ್ತು ತನಿಷ್ಕಾ ಕಪಿಲ್ ಕಾಲಭೈರವ ಅವರು ಮಲ್ಲೇಶ್ವರದ ಕೆನರಾ ಯೂನಿಯನ್ನಲ್ಲಿ ನಡೆಯುತ್ತಿರುವ ಸಿ.ವಿ.ಎಲ್. ಶಾಸ್ತ್ರಿ ಸ್ಮಾರಕ ರಾಜ್ಯ ಟೇಬಲ್ ಟೆನಿಸ್
ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ 19 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಗೆದ್ದರು.
ಬುಧವಾರ ನಡೆದ ಬಾಲಕರ ಫೈನಲ್ನಲ್ಲಿ ಗೌರವ್ 2-11, 7-11, 11-4, 11-8, 11-7, 11-9ರಿಂದ ವರುಣ್ ಕಶ್ಯಪ್ ಅವರನ್ನು ಮಣಿಸಿದರು. ಸೆಮಿಫೈನಲ್ನಲ್ಲಿ ಗೌರವ್ 11-5, 6-11, 9-11, 11-9, 11-6ರಿಂದ ಅಭಿನವ್ ಮೂರ್ತಿ ಎದುರು; ವರುಣ್ 11-4, 11-6, 9-11, 6-11, 11-9ರಿಂದ ಅರ್ಣವ್ ಎನ್. ಎದುರು ಗೆಲುವು ಸಾಧಿಸಿದ್ದರು.
ಬಾಲಕಿಯರ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ತನಿಷ್ಕಾ 11-7, 11-6, 4-11, 11-8, 11-7ರಿಂದ ಹಿಮಾಂಶಿ ಚೌಧರಿ ಅವರನ್ನು ಸೋಲಿಸಿದರು. ನಾಲ್ಕರ ಘಟ್ಟದ ಹಣಹಣಿಯಲ್ಲಿ ತನಿಷ್ಕಾ 11-8, 9-11, 11-4, 11-8ರಿಂದ ರಾಶಿ ವಿ.ರಾವ್ ವಿರುದ್ಧ; ಹಿಮಾಂಶಿ 11-9, 11-7, 11-2ರಿಂದ ಹಿಯಾ ಸಿಂಗ್ ವಿರುದ್ಧ ಜಯ ಗಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.