ADVERTISEMENT

IPL 2023 | ಆರ್‌ಸಿಬಿ ಮಾಜಿ ಕ್ಯಾಪ್ಟನ್‌ ವಿರಾಟ್ ಕೊಹ್ಲಿಯಿಂದ ಬೆಂಬಲಿಗರಿಗೆ ಧನ್ಯವಾದ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಮೇ 2023, 11:22 IST
Last Updated 23 ಮೇ 2023, 11:22 IST
ವಿರಾಟ್‌ ಕೊಹ್ಲಿ (ಪಿಟಿಐ ಚಿತ್ರ)
ವಿರಾಟ್‌ ಕೊಹ್ಲಿ (ಪಿಟಿಐ ಚಿತ್ರ)   

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರು ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

ಆರ್‌ಸಿಬಿ ತಂಡ ಈ ಬಾರಿ ಪ್ಲೇಆಫ್‌ ಪ್ರವೇಶಿಸುವಲ್ಲಿ ವಿಫಲವಾಗಿದ್ದು, ಕಪ್‌ ಗೆಲ್ಲುವ ಆಸೆ ಕನಸಾಗಿಯೇ ಉಳಿದಿದೆ.

ತಂಡದ ಐಪಿಎಲ್‌ ಅಭಿಯಾನ ಅಂತ್ಯಗೊಂಡ ಬಳಿಕ ಮಂಗಳವಾರ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಕೊಹ್ಲಿ, ಮತ್ತೆ ಬಲಿಷ್ಠ ತಂಡವಾಗಿ ಹಿಂದಿರುಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಅದ್ಭುತ ಕ್ಷಣಗಳನ್ನು ಒಳಗೊಂಡ ಈ ಬಾರಿಯ ಐಪಿಎಲ್‌ ಆವೃತ್ತಿ ಅಂತ್ಯಗೊಂಡಿದೆ. ಆದರೆ ದುರದೃಷ್ಟವಶಾತ್ ನಾವು ಗುರಿಯನ್ನು ತಲುಪುವಲ್ಲಿ ವಿಫಲವಾದೆವು. ನಿರಾಶೆಯಾಗಿದೆ... ಆದರೆ ನಾವು ತಲೆ ಎತ್ತಿ ನಡೆಯಬೇಕಿದೆ. ಪ್ರತಿ ಹಂತದಲ್ಲೂ ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ನಮ್ಮ ನಿಷ್ಠಾವಂತ ಬೆಂಬಲಿಗರಿಗೆ ಕೃತಜ್ಞರಾಗಿರುತ್ತೇವೆ. ಕೋಚ್‌ಗಳು, ಮ್ಯಾನೇಜ್‌ಮೆಂಟ್ ಮತ್ತು ಸಹ ಆಟಗಾರರಿಗೆ ಧನ್ಯವಾದಗಳು. ನಾವು ಮತ್ತೆ ಬಲಿಷ್ಠ ತಂಡವಾಗಿ ಹಿಂದಿರುಗುತ್ತೇವೆ’ ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.