ನವದೆಹಲಿ: ಭಾರತದ ಯುವರಾಜ್ ಸಿಂಗ್ ಅವರು ಶ್ರೇಷ್ಠ ಎಡಗೈ ಆಲ್ರೌಂಡರ್ ಎಂದು ಪಾಕಿಸ್ತಾನ ತಂಡದ ಹಿರಿಯ ಕ್ರಿಕೆಟಿಗ ಶೋಯಬ್ ಅಖ್ತರ್ ಹೇಳಿದ್ದಾರೆ.
ಸೋಮವಾರ ಕ್ರಿಕೆಟ್ನ ಎಲ್ಲ ಮಾದರಿಗಳಿಗೂ ಯುವರಾಜ್ ಸಿಂಗ್ ಅವರು ನಿವೃತ್ತಿ ಘೋಷಿಸಿದ್ದರು. ಅವರ ಆಟದ ಕುರಿತು ವೇಗದ ಬೌಲರ್ ಶೋಯಬ್ ಮಾತನಾಡಿದ್ದಾರೆ.
‘ಯುವರಾಜ್ ಅವರು ಪಂದ್ಯ ಗೆಲ್ಲಿಸಿಕೊಡಬಲ್ಲ ತಾರಾ ವರ್ಚಸ್ಸಿನ ಆಟಗಾರನಾಗಿದ್ದಾರೆ. ನನ್ನ ಒಳ್ಳೆಯ ಸ್ನೇಹಿತ’ ಎಂದಿದ್ದಾರೆ.
‘ಭಾರತದ ಕ್ರಿಕೆಟ್ ರಂಗದಲ್ಲಿ ಅತ್ಯಂತ ಶ್ರೇಷ್ಠ ಎಡಗೈ ಆಲ್ರೌಂಡರ್ ಯುವರಾಜ್ ಆಗಿದ್ದಾರೆ.
ಅವರ ಬ್ಯಾಟಿಂಗ್ ಮತ್ತು ಬೌಲಿಂಗ್ ಅತ್ಯಂತ ಆಕರ್ಷಕವಾಗಿತ್ತು’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.