ADVERTISEMENT

ಭಾರತ ತಂಡದ ಬ್ಯಾಟಿಂಗ್ ಕೋಚ್ ಸಮರ್ಥನೇ?: ಯುವಿ ಪ್ರಶ್ನೆ

ಹಿರಿಯ ಆಲ್‌ರೌಂಡರ್ ಯುವರಾಜ್ ಸಿಂಗ್ ಪ್ರಶ್ನೆ

ಪಿಟಿಐ
Published 13 ಮೇ 2020, 19:45 IST
Last Updated 13 ಮೇ 2020, 19:45 IST
ಯುವರಾಜ್‌ ಸಿಂಗ್‌
ಯುವರಾಜ್‌ ಸಿಂಗ್‌   

ನವದೆಹಲಿ: ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಅವರಿಗೆ ಟ್ವೆಂಟಿ–20 ಮಾದರಿಯ ಆಟಗಾರರಿಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯವಿದೆಯೇ ಎಂದು ಹಿರಿಯ ಕ್ರಿಕೆಟಿಗ ಯುವರಾಜ್ ಸಿಂಗ್ ಪ್ರಶ್ನಿಸಿದ್ದಾರೆ.

‘ಅವರು (ರಾಥೋಡ್) ನನ್ನ ಗೆಳೆಯ ಹೌದು. ಆದರೆ ಈ ಪ್ರಶ್ನೆಗಳನ್ನು ಕೇಳಲು ನನಗೆ ಹಿಂಜರಿಕೆ ಇಲ್ಲ. ಅವರಿಗೆ ಈಗಿನ ಚುಟುಕು ಕ್ರಿಕೆಟ್‌ ಪೀಳಿಗೆಗೆ ತರಬೇತಿ ನೀಡುವ ಸಾಮರ್ಥ್ಯ ಇದೆಯೇ? ಅವರು ಯಾವ ದರ್ಜೆಯ ಕ್ರಿಕೆಟ್‌ ಆಡಿದ್ದಾರೆ’ ಎಂದು ಇನ್ಸ್ಟಾಗ್ರಾಮ್ ಸಂವಾದದಲ್ಲಿ ಯುವಿ ಪ್ರಶ್ನಿಸಿದ್ದಾರೆ.

ವಿಕ್ರಂ ರಾಥೋಡ್ ಹೋದ ವರ್ಷ ಸಂಜಯ್ ಬಂಗಾರ್ ಬದಲು ಭಾರತ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. ಅವರು 1996 ಮತ್ತು 97 ರಲ್ಲಿ ಭಾರತ ತಂಡವನ್ನು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT