ಬೆಂಗಳೂರು: ಎಫ್ಸಿ ಬೆಂಗಳೂರು ಯುನೈಟೆಡ್ ತಂಡದ ಮಿಡ್ಫೀಲ್ಡರ್ ಶ್ರೇಯಸ್ ಕೇತ್ಕರ್ ಅವರು ಭಾರತ 19 ವರ್ಷದೊಳಗಿನವರ ಫುಟ್ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ತರಬೇತಿಗಳು ಪುನರಾರಂಭವಾದ ಬಳಿಕ ಅವರು ತಂಡದೊಂದಿಗೆ ಅಭ್ಯಾಸ ನಡೆಸಲಿದ್ದಾರೆ.
‘ಭಾರತ 19 ವರ್ಷದೊಳಗಿನವರ ತಂಡದೊಂದಿಗೆ ತರಬೇತಿ ಪಡೆಯಲು ಆಯ್ಕೆಯಾಗಿದ್ದು ಖುಷಿ ನೀಡಿದೆ. ಭವಿಷ್ಯದಲ್ಲಿ ರಾಷ್ಟ್ರೀಯ ಸೀನಿಯರ್ ತಂಡಕ್ಕೂ ಆಡುವ ವಿಶ್ವಾಸವಿದೆ‘ ಎಂದು ಶ್ರೇಯಸ್ ಹೇಳಿದ್ದಾರೆ.
‘2022ರ 19 ವರ್ಷದೊಳಗಿನವರ ಎಎಫ್ಸಿ ಕಪ್ ಟೂರ್ನಿಗೆ ಭಾರತ ತಂಡಕ್ಕೆ ಆಯ್ಕೆಯಾಗುವುದು ನನ್ನ ಮೊದಲ ಗುರಿ‘ ಎಂದೂ ಶ್ರೇಯಸ್ ನುಡಿದರು.
ಶ್ರೇಯಸ್ ಅವರು ಎಫ್ಸಿಬಿಯು ತಂಡದ ಮುಖ್ಯ ಕೋಚ್ ರಿಚರ್ಡ್ ಹುಡ್ ಹಾಗೂ ಸಹಾಯಕ ಕೋಚ್ ಗೌರ್ಮಾಂಗಿ ಸಿಂಗ್ ಅವರ ಬಳಿ ಆಟದ ಕೌಶಲಗಳನ್ನು ಕಲಿತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.