ಬೆಂಗಳೂರು: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಈಚೆಗೆ ಚಿನ್ನದ ಪದಕ ಗೆದ್ದ ಪಿ.ವಿ. ಸಿಂಧು ಅವರಿಗೆ ಎಲ್ಲ ಕಡೆಯೂ ಸನ್ಮಾನಗಳ ಮಹಾಪೂರ ಹರಿದಿದೆ. ಆದರೆ ತಮಿಳುನಾಡಿನ 70 ವರ್ಷದ ಹಿರಿಯ ನಾಗರಿಕ ಮಲಯಸ್ವಾಮಿ ಅವರು ಸಿಂಧು ಅವರನ್ನು ಮದುವೆಯಾಗುವುದಾಗಿ ಹೇಳುತ್ತಿದ್ದಾರೆ.
ರಾಮನಾಥಪುರಂ ಜಿಲ್ಲೆಯ ಮ್ಯಾಜಿಸ್ಟ್ರೇಟ್ ನಡೆಸಿದ ಸಾಪ್ತಾಹಿಕ ಜನಸ್ಪಂದನದಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಿರುವ ಮಲಯಸ್ವಾಮಿ, ‘ನನಗೆ ಈಗ 16 ವರ್ಷ ವಯಸ್ಸು (ಜನನ; 4ನೇ ಏಪ್ರಿಲ್ 2004) ಆಗಿದೆ. ಸಿಂಧು ಸಾಧನೆಯಿಂದ ಮರುಳಾಗಿದ್ದೇನೆ. ಅವರನ್ನು ಜೀವನಸಂಗಾತಿಯಾಗಿ ಪಡೆಯಲು ಇಚ್ಛಿಸುತ್ತೇನೆ’ ಎಂದು ಬರೆದಿದ್ದಾರೆ.
‘ಒಂದೊಮ್ಮೆ ಅವರು ಮದುವೆಗೆ ಒಪ್ಪದಿದ್ದರೆ ಅಪಹರಿಸಿಕೊಂಡು ಹೋಗುತ್ತೇನೆ’ ಎಂದು ಹೇಳಿದ್ದಾರೆ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.