
ಪ್ರಜಾವಾಣಿ ವಾರ್ತೆ
ಬೆಂಗಳೂರು: ಧಾರವಾಡದ ಅರ್ಜುನ್ ಕಲಾಲ್ ಹಾಗೂ ಬಾಗಲಕೋಟೆಯ ವಿದ್ಯಾ ಮುತ್ತಪ್ಪ ಲಮಾಣಿ ಅವರು ಇಲ್ಲಿ ನಡೆಯುತ್ತಿರುವ ರಾಜ್ಯ ಮಿನಿ ಗೇಮ್ಸ್ನಲ್ಲಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ 10 ಕಿ.ಮೀ. ಟೈಮ್ ಟ್ರಯಲ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು.
ಅರ್ಜುನ್ 14ನಿ. 15 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಧಾರವಾಡದ ಅಭಿಷೇಕ್ (14ನಿ. 54 ಸೆ.) ಬೆಳ್ಳಿ ಹಾಗೂ ಬೆಂಗಳೂರಿನ ಸ್ನೇಹೋ ರಾಯ್(14ನಿ. 59ಸೆ.) ಕಂಚು ಜಯಿಸಿದರು. ಬಾಲಕಿಯರ ಸ್ಪರ್ಧೆಯಲ್ಲಿ ವಿದ್ಯಾ 11ನಿ. 13 ಸೆಕೆಂಡುಗಳಲ್ಲಿ ಸ್ಪರ್ಧೆ ಮುಗಿಸಿದರು. ವಿಜಯಪುರದ ವರ್ಷಾ ಎಸ್.ಸಿ. (11ನಿ. 40ಸೆ.) ಬೆಳ್ಳಿ ಹಾಗೂ ಬಾಗಲಕೋಟೆಯ ಸಹನಾ ವಿ.ಎಂ.(14ನಿ. 57ಸೆ.) ಕಂಚು ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.