ADVERTISEMENT

ಭಾರತ ಆರ್ಚರಿ ಸಂಸ್ಥೆ ಅಮಾನತು

ಪಿಟಿಐ
Published 8 ಆಗಸ್ಟ್ 2019, 20:15 IST
Last Updated 8 ಆಗಸ್ಟ್ 2019, 20:15 IST
   

ಕೋಲ್ಕತ್ತ (ಪಿಟಿಐ): ಎರಡು ಪ್ರತ್ಯೇಕ ಸಂಸ್ಥೆಗಳನ್ನು ಆಯ್ಕೆ ಮಾಡುವ ಮೂಲಕ ಮಾರ್ಗ ದರ್ಶಿ ಸೂತ್ರಗಳನ್ನು ಧಿಕ್ಕರಿಸಿದ ಭಾರತ ಆರ್ಚರಿ ಸಂಸ್ಥೆಯನ್ನು (ಎಎಐ), ವಿಶ್ವ ಆರ್ಚರಿ (ಡಬ್ಲ್ಯುಎ) ಗುರುವಾರ ಅಮಾ ನತು ಮಾಡಿದೆ. ಈ ತಿಂಗಳ ಕೊನೆಯೊಳಗೆ ಎಲ್ಲವನ್ನು ಸರಿಪ ಡಿಸುವಂತೆ ತಾಕೀತು ಮಾಡಿದೆ.

ಸೋಮವಾರದಿಂದಲೇ ಅಮಾನತು ಜಾರಿಗೆ ಬಂದಿದೆ. ಇದೇ ತಿಂಗಳ 19 ರಿಂದ 25ರವರೆಗೆ ಮ್ಯಾಡ್ರಿಡ್‌ (ಸ್ಪೇನ್‌)ನಲ್ಲಿ ವಿಶ್ವ ಯುವ ಆರ್ಚರಿ ಚಾಂಪಿಯನ್‌ಷಿಪ್‌ ನಡೆಯಲಿದ್ದು, ಅಲ್ಲಿ ಭಾರತ ತಂಡ ರಾಷ್ಟ್ರಧ್ವಜದಡಿ ಭಾಗವಹಿಸಲು ಕೊನೆಯ ಅವಕಾಶ ನೀಡಲಾಗಿದೆ.

ಭಾರತ ಆರ್ಚರಿ ಸಂಸ್ಥೆಯನ್ನು ಅಮಾನತುಗೊಳಿಸುವ ಮೂಲಕ ವಿಶ್ವ ಆರ್ಚರಿಯು ಜೂನ್‌ನಲ್ಲಿ ತೆಗೆದುಕೊಂಡ ನಿರ್ಧಾರ ಜಾರಿಮಾಡುತ್ತಿದೆ ಎಂದು ವಿಶ್ವ ಆರ್ಚರಿ ಮಹಾ ಪ್ರಧಾನ ಕಾರ್ಯದರ್ಶಿ ಟಾಮ್‌ ಡಿಲೆನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಒಳಜಗಳ ಬಗೆಹರಿಸಿ ಸಂಸ್ಥೆ ಒಗ್ಗೂಡಿಸಲು ಜುಲೈ ಕೊನೆಯವರೆಗೆ ಎಎಐಗೆ ವಿಶ್ವ ಆರ್ಚರಿಗೆ ಗಡುವನ್ನು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.