ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ಬೆಂಗಳೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ ನಡೆಯಿತು. ಹದಗೆಟ್ಟಿರುವ ಸಿಂಥೆಟಿಕ್ ಟ್ರ್ಯಾಕ್ ಬಗ್ಗೆ ಅಥ್ಲೀಟ್ಗಳು ಮಾತನಾಡಿ ಕೊಳ್ಳುತ್ತಿದ್ದರು. ಆದರೆ ತೊಂದರೆಗಳ ಬಹಿರಂಗವಾಗಿ ಮಾತನಾಡಲು ಯಾರೂ ಮುಂದಾಗಲಿಲ್ಲ. ಹೆಚ್ಚಿನವರು ಕ್ರೀಡಾ ವಸತಿ ನಿಲಯಗಳ ಅಥ್ಲೀಟ್ಗಳು. ಆದ್ದರಿಂದ ಅವರಾಗಲಿ, ಅವರ ಕೋಚ್ ಗಳಾಗಲಿ ‘ದೊಡ್ಡವರ’ ಕೆಂಗಣ್ಣಿಗೆ ಗುರಿಯಾಗಲು ಬಯಸಲಿಲ್ಲ.
‘ಸಮಸ್ಯೆ ಹೇಳಿಕೊಳ್ಳುವುದು ಹೇಗೆ’ ಎಂದು ಕೋಚ್ ಒಬ್ಬರು ಅಸ ಹಾಯಕತೆ ವ್ಯಕ್ತಪಡಿಸಿದರು. ‘ಸದ್ಯದಲ್ಲೇ ರಾಷ್ಟ್ರೀಯ ಕ್ರೀಡಾಕೂಟ ನಡೆಯಲಿರುವುದರಿಂದ ಪ್ರಮುಖರು ಸ್ಪರ್ಧಿಸುತ್ತಿಲ್ಲ. ಆದ್ದರಿಂದ ದೂರುಗಳು ಕೇಳಿಬಂದಿಲ್ಲ’ ಎಂದು ಮತ್ತೊಬ್ಬರು ಕೋಚ್ ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.