ಬೆಂಗಳೂರು: ಸಿದ್ಧಾಂತ್ ಎಂ. ಮತ್ತು ಮಿಹಿಕಾ ಉಡುಪ ಅವರು, ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ 13 ವರ್ಷದೊಳಗಿವರ ವಿಭಾಗದಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್ನಲ್ಲಿ ಪ್ರಶಸ್ತಿ ಗೆದ್ದುಕೊಂಡರು.
ಜೆಟಿಟಿಎ ಆಶ್ರಯದಲ್ಲಿ ನಡೆಯುತ್ತಿರುವ ಈ ಟೂರ್ನಿಯ ಬಾಲಕರ ವಿಭಾಗದ ಫೈನಲ್ನಲ್ಲಿ ಸಿದ್ಧಾಂತ್ 11–7, 2–11, 11–6, 11–7 ರಿಂದ ಆರ್ಣವ್ ಮಿಥುನ್ ಅವರನ್ನು ಸೋಲಿಸಿದರು.
ಸೆಮಿಫೈನಲ್ ಪಂದ್ಯಗಳಲ್ಲಿ ಆರ್ಣವ್ 11–8, 4–11, 11–7, 12–10 ರಿಂದ ಸಾತ್ವಿಕ್ ಎಂ. ವಿರುದ್ಧ, ಸಿದ್ಧಾಂತ್ ಎಂ. 11–4, 11–5, 12–10 ರಿಂದ ಸುಚೇತ್ ಸಿ. ಧರೆಣ್ಣವರ ವಿರುದ್ಧ ಜಯಗಳಿಸಿದ್ದರು.
ಬಾಲಕಿಯರ ವಿಭಾಗದ ಫೈನಲ್ನಲ್ಲಿ 14–12 8–11, 11–4, 11–6 ರಿಂದ ಆಧ್ಯಾ ಎಂ. ವಿರುದ್ಧ ಜಯಗಳಿಸಿದರು. ಸೆಮಿಫೈನಲ್ ಪಂದ್ಯಗಳಲ್ಲಿ ಆಧ್ಯಾ 14–12, 11–6, 7–11, 2–11, 11–9 ರಿಂದ ಯುಕ್ತಾ ಹರ್ಷ ವಿರುದ್ಧ, ಮಿಹಿಕಾ 11–3, 8–11, 11–9, 6–11, 11–9 ರಿಂದ ಆಶ್ರಿತಾ ವಿರುದ್ಧ ಗೆಲುವು ದಾಖಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.