ಪೊಲೀಸ್ ಧ್ವಜದೊಂದಿಗೆ (ಎಡದಿಂದ) ಬಸವರಾಜ್ ಪಾಸ್ಚಪುರ, ಅಮ್ಜಾ ಹುಸೇನ್ (ಕರ್ನಾಟಕ ರಾಜ್ಯ ಪೊಲೀಸ್ ತಂಡದ ವ್ಯವಸ್ಥಾಪಕ ಕಮಾಂಡೆಂಟ್) ಮತ್ತು ಗಿರೀಶ್ ಟಿ.ಎಸ್.
ಬೆಂಗಳೂರು: ಕರ್ನಾಟಕದ ಪೊಲೀಸ್ ತಂಡವನ್ನು ಪ್ರತಿನಿಧಿಸಿದ್ದ ಬಸವರಾಜ್ ಪಾಸ್ಚಪುರ ಮತ್ತು ಗಿರೀಶ್ ಟಿ.ಎಸ್. ಅವರು ಜಮ್ಮು ಕಾಶ್ಮೀರದ ಶ್ರೀನಗರದ ಶೇರ್ ಐ. ಕಾಶ್ಮೀರ ಒಳಾಂಗಣ ಕ್ರೀಡಾಂಗಣದಲ್ಲಿ ಈಚೆಗೆ ನಡೆದ 10ನೇ ಅಖಿಲ ಭಾರತೀಯ ಪೊಲೀಸ್ ಜೂಡೊ ಕ್ಲಸ್ಟರ್ -2025ರ ಪೆಂಕಾಕ್ ಸಿಲಾತ್ ಕ್ರೀಡೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.
ಬಸವರಾಜ್ ಅವರು ಬೆಂಗಳೂರಿನ ಐಎಸ್ಡಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಮತ್ತು ಗಿರೀಶ್ ಅವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.