ADVERTISEMENT

ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ: ಮಂಜುನಾಥ ಪ್ರಥಮ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 22:30 IST
Last Updated 20 ಜನವರಿ 2026, 22:30 IST
<div class="paragraphs"><p>ಗೋಕಾಕನಲ್ಲಿ ಸೋಮವಾರ ದೇಹದಾರ್ಢ್ಯ ರಾಜ್ಯಮಟ್ಟದ ಸ್ವರ್ಧೆಯಲ್ಲಿ ವಿಜೇತರಾದ ವರುಣಕುಮಾರ್, ಸ್ವರೂಪ ಬಂಗೇರಾ, ಮಂಜುನಾಥ ಐಯ್ಯರ್ ಮತ್ತು ಕುಮಾರ ಕೆ ಅವರಿಗೆ ಸ್ಪರ್ಧೆಯ ಆಯೋಜಕರು ಬಹುಮಾನ ವಿತರಿಸಿದರು.</p></div>

ಗೋಕಾಕನಲ್ಲಿ ಸೋಮವಾರ ದೇಹದಾರ್ಢ್ಯ ರಾಜ್ಯಮಟ್ಟದ ಸ್ವರ್ಧೆಯಲ್ಲಿ ವಿಜೇತರಾದ ವರುಣಕುಮಾರ್, ಸ್ವರೂಪ ಬಂಗೇರಾ, ಮಂಜುನಾಥ ಐಯ್ಯರ್ ಮತ್ತು ಕುಮಾರ ಕೆ ಅವರಿಗೆ ಸ್ಪರ್ಧೆಯ ಆಯೋಜಕರು ಬಹುಮಾನ ವಿತರಿಸಿದರು.

   

ಗೋಕಾಕ (ಬೆಳಗಾವಿ ಜಿಲ್ಲೆ): ದಾವಣಗೆರೆಯ ಮಂಜುನಾಥ್ ಅಯ್ಯರ್ ಅವರು 12ನೇ ಸತೀಶ ಶುಗರ್ಸ್‌ ಕ್ಲಾಸಿಕ್‌ ದೇಹದಾರ್ಢ್ಯ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ₹2 ಲಕ್ಷ ನಗದು ಮತ್ತು ಟ್ರೋಫಿಯನ್ನು ಗೆದ್ದುಕೊಂಡರು.

ಮಹರ್ಷಿ ಶ್ರೀವಾಲ್ಮೀಕಿ ತಾಲ್ಲೂಕು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಸ್ಪರ್ಧೆಯಲ್ಲಿ ಬೆಂಗಳೂರಿನ ಕುಮಾರ ಕೆ. ಅವರು ಮೊದಲನೇ ರನ್ನರ್‌ ಅಪ್ ಆಗಿ ₹1 ಲಕ್ಷ ನಗದು ಮತ್ತು ಟ್ರೋಫಿ ಪಡೆದರು.

ADVERTISEMENT

ಉಡುಪಿಯ ಸ್ವರೂಪ ಬಂಗೇರಾ ಅವರು ಎರಡನೇ ರನ್ನರ ಅಪ್‌ ಆಗಿ  ₹50 ಸಾವಿರ ನಗದು, ಟ್ರೋಫಿ ಹಾಗೂ ಬೆಸ್ಟ್ ಪೋಸರ್ ಆಗಿ ದಾವಣಗೆರೆಯ ವರುಣಕುಮಾರ್ ಆಯ್ಕೆಯಾಗಿ ₹10 ಸಾವಿರ ನಗದು ಮತ್ತು ಟ್ರೋಫಿ ತಮ್ಮದಾಗಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.