ADVERTISEMENT

ಕರ್ನಾಟಕದ ಶಂಕರ್‌ಗೆ ಅಗ್ರಶ್ರೇಯಾಂಕ

7ರಿಂದ ಮರೀನಾ ಓಪನ್‌ ಎಐಟಿಎ ರ‍್ಯಾಂಕಿಂಗ್‌ ವೀಲ್‌ಚೇರ್‌ ಟೆನಿಸ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 18:59 IST
Last Updated 3 ಆಗಸ್ಟ್ 2019, 18:59 IST

ಚೆನ್ನೈ: ಕರ್ನಾಟಕದ ಶಂಕರ್‌ ವೀರಾಸ್ವೆ ಹಾಗೂ ಪ್ರತಿಮಾ ರಾವ್‌ ಅವರಿಗೆ ಮರೀನಾ ಓಪನ್‌ ಎಐಟಿಎ ರ‍್ಯಾಂಕಿಂಗ್‌ ವೀಲ್‌ಚೇರ್‌ ಟೆನಿಸ್‌ ಟೂರ್ನಿಯ ಅಗ್ರಶ್ರೇಯಾಂಕ ನೀಡಲಾಗಿದೆ. 40ಕ್ಕಿಂತ ಅಧಿಕ ಸ್ಪರ್ಧಿಗಳು ಭಾಗವಹಿಸುವ ಟೂರ್ನಿಯು ಇಲ್ಲಿನಎಸ್‌ಡಿಎಟಿ ಕ್ರೀಡಾಂಗಣದಲ್ಲಿಆಗಸ್ಟ್‌ 7ರಿಂದ ಆಯೋಜನೆಯಾಗಿದೆ.

ತಮಿಳುನಾಡು ಟೆನಿಸ್‌ ಸಂಸ್ಥೆಯ ಅಧ್ಯಕ್ಷ ವಿಜಯ್‌ ಅಮೃತರಾಜ್‌, ಭಾರತದಲ್ಲಿ ವೀಲ್‌ಚೇರ್‌ ಟೆನಿಸ್‌ ಬೆಳವಣಿಗೆಯ ಕುರಿತು ಮಾತನಾಡಿದರು. ‘ವಿಭಿನ್ನ ಸಾಮರ್ಥ್ಯ ಉಳ್ಳವರನ್ನು ಒಳಗೊಂಡು ಟೆನಿಸ್‌ ಕ್ಷೇತ್ರ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವುದು ಮಹತ್ವದ್ದಾಗಿದೆ’ ಎಂದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ಪರ್ಧಿಗಳು ಭಾಗವಹಿಸುವ ವಿಶ್ವಾಸವಿದೆ’ ಎಂದು ಅಮೃತರಾಜ್‌ ಹೇಳಿದರು.

ADVERTISEMENT

ಟೂರ್ನಿಯಲ್ಲಿ ಭಾಗವಹಿಸುತ್ತಿರುವ 34 ಪುರುಷ ಸ್ಪರ್ಧಿಗಳಲ್ಲಿ 19 ಮಂದಿ ಕರ್ನಾಟಕದವರು. ತಮಿಳುನಾಡಿನ 13 ಹಾಗೂ ಇಂಗ್ಲೆಂಡ್‌ನಿಂದ ಓರ್ವ ಸ್ಪರ್ಧಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಎಂಟು ಮಹಿಳಾ ಸ್ಪರ್ಧಿಗಳಲ್ಲಿ ಏಳು ಮಂದಿ ಕರ್ನಾಟಕದವರು.

ತಮಿಳುನಾಡಿನಿಂದ ಒಬ್ಬರು ಪಾಲ್ಗೊಳ್ಳಲಿದ್ದಾರೆ. ಟೂರ್ನಿಯ ಒಟ್ಟು ಬಹುಮಾನ ಮೊತ್ತ ₹ 2.32 ಲಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.