ಬೆಂಗಳೂರು: ಶೂಟೌಟ್ನಿಂದ ಹತ್ಯೆಯಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಡಿದ್ದ ಕೊನೆಯ ಪೋಸ್ಟ್ ಒಂದು ವೈರಲ್ ಆಗಿದೆ.
ಸಿಧು ಅವರು ಇನ್ಸ್ಟಾಗ್ರಾಮ್ನಲ್ಲಿ ಕಿರು ವಿಡಿಯೊ ಒಂದನ್ನು ಪೋಸ್ಟ್ ಮಾಡಿ ಅದಕ್ಕೆ ‘ಮರೆತುಬಿಡು, ದೆವ್ವವನ್ನು ಮಿಸ್ ಮಾಡಬೇಡ‘ ಎಂದು ಅಡಿಬರಹ ನೀಡಿದ್ದರು.
ಅದಾದ ಬಳಿಕ ಅವರನ್ನು ಹತ್ಯೆ ಮಾಡಲಾಗಿದ್ದು, ಅಭಿಮಾನಿಗಳು ಈ ಪೋಸ್ಟ್ಗೂ ಸಿಧು ಹತ್ಯೆಗೂ ಸಂಬಂಧವಿದ್ದಿರಬಹುದು ಅಥವಾ ಅದು ಕಾಕತಾಳೀಯ ಆಗಿರಬಹುದು ಎಂದು ಚರ್ಚಿಸಲಾರಂಭಿಸಿದ್ದಾರೆ.
ಸಿಧು ಹತ್ಯೆಗೆ ಎರಡು ಗ್ಯಾಂಗ್ಗಳ ನಡುವಿನ ದ್ವೇಷವೇ ಕಾರಣ ಎಂದು ಪಂಜಾಬ್ ಪೊಲೀಸರು ಹೇಳಿದ್ದರು.
ಅದರ ಬೆನ್ನಲ್ಲೇ, ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ತಂಡದವರು ಸಿಧು ಹತ್ಯೆಯ ಹೊಣೆ ಹೊತ್ತುಕೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.