ADVERTISEMENT

ಕಳ್ಳರಿಂದ ವೃದ್ಧ, ಪೊಲೀಸ್ ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2018, 11:14 IST
Last Updated 7 ಜುಲೈ 2018, 11:14 IST
ಹಳಿಯಾಳದಲ್ಲಿ ಕಳ್ಳರು ಕಲ್ಲು ಹೊಡೆದು ಗಾಯಗೊಂಡ ಹಿರಿಯ ಲಕ್ಷ್ಮಣ ಗಾವಡು ಚವ್ಹಾಣ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಹಳಿಯಾಳದಲ್ಲಿ ಕಳ್ಳರು ಕಲ್ಲು ಹೊಡೆದು ಗಾಯಗೊಂಡ ಹಿರಿಯ ಲಕ್ಷ್ಮಣ ಗಾವಡು ಚವ್ಹಾಣ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ   

ಹಳಿಯಾಳ: ಪಟ್ಟಣದ ಸಿದ್ದರಾಮೇಶ್ವರ ಗಲ್ಲಿಯಲ್ಲಿ ಶನಿವಾರ ಎರಡು ಮನೆಗಳಿಗೆ ಕನ್ನ ಹಾಕಿದ ಕಳ್ಳರುಒಬ್ಬರು ಹಿರಿಯರು ಮತ್ತುಪೊಲೀಸ್ ಕಾನ್‌ಸ್ಟೆಬಲ್ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಬೆಳಗಿನ ಜಾವ3 ಗಂಟೆ ಸುಮಾರಿಗೆನಾಲ್ವರು ಕಳ್ಳರು ಸಿದ್ದರಾಮೇಶ್ವರ ಗಲ್ಲಿಯ ಒಂದು ಮನೆಯ ಬೀಗದ ಕೀಲಿಯನ್ನು ಒಡೆದು ಒಳ ನುಗ್ಗಿದರು. ಆ ಮನೆಯಲ್ಲಿ ಹುಡುಕಾಡಿದಾಗ ಅವರಿಗೆ ಏನೂ ಸಿಗಲಿಲ್ಲ. ಬಳಿಕಪಕ್ಕದ ಮನೆಯ ಹತ್ತಿರ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಮಾಡಲು ಯತ್ನಿಸಿದರು. ಆಗ ಸದ್ದು ಕೇಳಿ ಆ ಮನೆಯ ಯಜಮಾನ ಲಕ್ಷ್ಮಣ ಗಾವಡು ಚವ್ಹಾಣ ಅವರು ಗದರಿದರು. ಆಗ ಕಳ್ಳರು ಅವರ ತಲೆಗೆ ಕಲ್ಲಿನಿಂದ ಹೊಡೆದು ಪರಾರಿಯಾದರು.

ಸುದ್ದಿ ತಿಳಿಯುತ್ತಿದ್ದಂತೆ ಹಳಿಯಾಳ ಪೊಲೀಸ್ ಠಾಣೆಯಸಿಬ್ಬಂದಿಕೂಡಲೇ ಕಾರ್ಯಪ್ರವೃತ್ತರಾದರು.ಕಳ್ಳರನ್ನು ಹುಡುಕಿ ಬೆನ್ನಟ್ಟಿದಾಗಕಳ್ಳರ ಗುಂಪಿನಲ್ಲಿದ್ದ ಒಬ್ಬ, ಪೊಲೀಸ್ ಕಾನ್‌ಸ್ಟೆಬಲ್ ಅಶೋಕ ಬಸಲಿಂಗಪ್ಪಾ ಹುಬ್ಬಳ್ಳಿ ಎಂಬುವವರು ಮೇಲೆ ಹಲ್ಲೆ ಮಾಡಿದ. ಇದೆಲ್ಲವೂ ಸಿನಿಮೀಯ ಮಾದರಿಯಲ್ಲಿ ಕಳ್ಳರು ಕತ್ತಲಲ್ಲಿ ತಪ್ಪಿಸಿಕೊಂಡರು ಎಂದು ಸ್ಥಳೀಯರು ತಿಳಿಸಿದ್ದಾರೆ.

ADVERTISEMENT

ಇಬ್ಬರೂ ಗಾಯಾಳುಗಳನ್ನು ಹಳಿಯಾಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.