ADVERTISEMENT

ಕಸ್ತೂರಿ ನಿವಾಸದಲ್ಲಿ ಸಪ್ತಪದಿ ಸಂಭ್ರಮ: ಕಾವ್ಯಾಂಜಲಿಯಲ್ಲಿ ಮಂಡ್ಯ ರಮೇಶ್

ಉದಯ ಟಿವಿಯಲ್ಲಿ ಸೋಮವಾರದಿಂದ ಶನಿವಾರದವರೆಗೆ ಸಂಜೆ ಏಳು ಗಂಟೆಗೆ ಪ್ರಸಾರವಾಗುತ್ತಿರುವ ಕಸ್ತೂರಿ ನಿವಾಸ ಧಾರಾವಾಹಿ ಇತ್ತೀಚೆಗೆ 500 ಕಂತುಗಳನ್ನು ಪೂರೈಸಿದೆ.

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 12:32 IST
Last Updated 30 ಜುಲೈ 2021, 12:32 IST
ಉದಯ ಟಿವಿಯಲ್ಲಿ ಸೋಮವಾರದಿಂದ ಶನಿವಾರದವರೆಗೆ ಸಂಜೆ ಏಳು ಗಂಟೆಗೆ ಪ್ರಸಾರವಾಗುತ್ತಿರುವ ಕಸ್ತೂರಿ ನಿವಾಸ ಧಾರಾವಾಹಿ ಇತ್ತೀಚೆಗೆ 500 ಕಂತುಗಳನ್ನು ಪೂರೈಸಿದೆ.
ಉದಯ ಟಿವಿಯಲ್ಲಿ ಸೋಮವಾರದಿಂದ ಶನಿವಾರದವರೆಗೆ ಸಂಜೆ ಏಳು ಗಂಟೆಗೆ ಪ್ರಸಾರವಾಗುತ್ತಿರುವ ಕಸ್ತೂರಿ ನಿವಾಸ ಧಾರಾವಾಹಿ ಇತ್ತೀಚೆಗೆ 500 ಕಂತುಗಳನ್ನು ಪೂರೈಸಿದೆ.   
ಈ ಸಂದರ್ಭದಲ್ಲಿ ಮದುವೆ ಸಂಭ್ರಮದ ವಿಶೇಷ ಸಂಚಿಕೆಯನ್ನು ವೀಕ್ಷಕರಿಗಾಗಿ ಉದಯ ಟಿವಿ ಪ್ರಸ್ತುತಪಡಿಸುತ್ತಿದೆ.
ಕಸ್ತೂರಿ ನಿವಾಸದಲ್ಲಿ ಖುಷಿಯ ಜತೆಗೆ ರಾಘವ್ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಈ ಕ್ಷಣಗಳಿಗೆ ವೀಕ್ಷಕರು ಸಾಕ್ಷಿಯಾಗಲಿದ್ದಾರೆ.
ವಿಶೇಷ ಸಂಚಿಕೆಯಲ್ಲಿ ಶಾಸ್ತ್ರೋಕ್ತ ಮದುವೆ ಕಾರ್ಯಕ್ರಮ, ಬಳೆ ಶಾಸ್ತ್ರ, ಅರಿಶಿನ ಶಾಸ್ತ್ರ, ಮೆಹಂದಿ ಕಾರ್ಯಕ್ರಮವನ್ನು ನೈಜ ರೀತಿಯಲ್ಲಿ ಮೂಡಿಬರುವಂತೆ ಪ್ರಸ್ತುತಪಡಿಸಲಾಗಿದೆ.
ಮತ್ತೊಂದೆಡೆ, ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8:30ಕ್ಕೆ ಪ್ರಸಾರವಾಗುವ ಕಾವ್ಯಾಂಜಲಿ ಧಾರಾವಾಹಿ 300 ಸಂಚಿಕೆಗಳನ್ನು ಪೂರೈಸಿದೆ. ಕಾವ್ಯಾಂಜಲಿಯ ‘ಪ್ರೀತಿ ಮುಂಗಾರು’ ವಿಶೇಷ ಪ್ಯಾಕೇಜ್‌ನಲ್ಲಿ ಮಂಡ್ಯ ರಮೇಶ್ ಕಾಣಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.