ADVERTISEMENT

ಆಶಾವಾದದ ಕ್ಷಣ...

ಪ್ರಶಾಂತ ಎಚ್‌.ಜಿ.
Published 20 ಆಗಸ್ಟ್ 2019, 12:01 IST
Last Updated 20 ಆಗಸ್ಟ್ 2019, 12:01 IST
ಕಲಬುರ್ಗಿಯಲ್ಲಿ ಮಳೆಯಾಟ... ಚಿತ್ರ: ಪ್ರಶಾಂತ ಎಚ್‌.ಜಿ.
ಕಲಬುರ್ಗಿಯಲ್ಲಿ ಮಳೆಯಾಟ... ಚಿತ್ರ: ಪ್ರಶಾಂತ ಎಚ್‌.ಜಿ.   

ಕಲಬುರ್ಗಿ ನಗರದರಿಂಗ್ ರಸ್ತೆ ಸಮೀಪದ ಇಟ್ಟಿಗೆ ಗೂಡು ಆವರಣದಲ್ಲಿ ನಿಂತ ಮಳೆ ನೀರಿನಲ್ಲಿ ಇಟ್ಟಿಗೆಗಳು ಒದ್ದೆಯಾದವು. ಸೂರಿನ ಭರವಸೆ ಸಿಗದಾಯಿತು. ಆದರೆ, ಆಶಾಭಾವ ಕುಂದಿಲ್ಲ ಎಂಬುದಕ್ಕೆ ಈ ಮಕ್ಕಳೇ ಸಾಕ್ಷಿಯಾದರು.

ಮೊಣಕಾಲಿನಷ್ಟು ನೀರಿದ್ದರೇನುಧೈರ್ಯಗೆಡದೇ ಮುನ್ನಡೆಯೋಣ. ಹಸಿ ಇಟ್ಟಿಗೆಯಲ್ಲೇ ಸೂರು ಕಟ್ಟಿಕೊಂಡು ಬದುಕು ರೂಪಿಸಿಕೊಳ್ಳೋಣ ಎಂಬಂತೆ ಅಕ್ಕ ತಳ್ಳುಗಾಡಿಯ ಹಿಡಿಕೆಯನ್ನು ಹಿಡಿದು ಹೆಜ್ಜೆ ಹಾಕಿದರೆ, ಅದನ್ನು ತಳ್ಳುತ್ತ ತಮ್ಮ ಸಾಥ್‌ ನೀಡಿದ. ಅವರಿಬ್ಬರಿಗೂ ಜೊತೆಯಾಗಲು ಇನ್ನೊಬ್ಬ ಬಾಲಕ ಯೋಚಿಸತೊಡಗಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT