ವಾಸ್ತು ಮನುಷ್ಯನ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂದು ಜ್ಯೋತಿಷ ಹೇಳುತ್ತದೆ. ಒಂದು ಮನೆ ನಿರ್ಮಾಣ ಮಾಡಬೇಕಾದರೇ ವಾಸ್ತು ಪ್ರಕಾರವಾಗಿ, ಯಾವ ಸ್ಥಳದಲ್ಲಿ ಏನು ಬರಬೇಕು ಎಂದು ಜ್ಯೋತಿಷಿಗಳ ಸಲಹೆ ಪಡೆಯುವುದುಂಟು. ಹಾಗಿದ್ದರೆ ವಾಸ್ತು ನಮ್ಮ ಜೀವನದ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದನ್ನು ನೋಡೋಣ ಬನ್ನಿ.
ಮನೆಯ ಆಗ್ನೇಯ ದಿಕ್ಕಿನಲ್ಲಿ ಶೌಚಾಲಯ ಇದ್ದರೆ ಅನಾಹುತಕ್ಕೆ ಕಾರಣವಾಗುತ್ತದೆ. ಆರೋಗ್ಯದ ಮೇಲೆ ದುಷ್ಟ ಪರಿಣಾಮ ಬೀರುತ್ತದೆ ಎಂದು ಜ್ಯೋತಿಷ ಹೇಳುತ್ತದೆ. ಆಗ್ನೇಯ ದಿಕ್ಕಿನಲ್ಲಿ ಶೌಚಾಲಯ ಇರುವುದರಿಂದ ಬಂಧುಗಳು ವೈರಿಗಳಾಗಿ ಬದಲಾಗುತ್ತಾರೆ. ಆಗ್ನೇಯ ಸ್ಥಳ ಅನ್ನಪೂರ್ಣೇಶ್ವರಿಯ ಸ್ಥಾನವೆಂದು ಹೇಳಲಾಗುತ್ತದೆ. ಅಲ್ಲಿ ನಾವು ಶೌಚಾಲಯ ಮಾಡಿದರೆ ದೇವಿಗೆ ಅಪಚಾರ ಮಾಡಿದಂತೆ ಎಂದು ಜ್ಯೋತಿಷ ಹೇಳುತ್ತದೆ.
ಇದರಿಂದಾಗುವ ತೊಂದರೆಗಳೇನು?
ಇದರಿಂದಾಗಿ ಮನೆಯ ಯಜಮಾನನಿಗೆ ಆನಾರೋಗ್ಯ ಕಾಡುತ್ತದೆ. ಮಕ್ಕಳಲ್ಲಿ ಚಂಚಲತೆ, ಮಾನಸಿಕ ಹಾನಿ ಹಾಗೂ ಸ್ತ್ರೀಯರಿಂದ ಸಮಸ್ಯೆಗಳು ಕಾಡುತ್ತವೆ ಎಂದು ಜ್ಯೋತಿಷ ಹೇಳುತ್ತದೆ.
ಜ್ಯೋತಿಷದ ಪ್ರಕಾರ ಮನೆಯ ಪೂರ್ವ ಆಗ್ನೇಯಕ್ಕೆ ನೀರು ಹರಿದರೆ, ಶೌಚಾಲಯದ ನೀರಿನ ತೊಟ್ಟಿ, ಸೇಫ್ಟಿ ಟ್ಯಾಂಕ್, ಬೋರ್ ವೆಲ್ ಇತ್ಯಾದಿಗಳು ಹಾಗೂ ಜಲಸಂಗ್ರಹಣೆ ಇದ್ದರೆ ಆ ಮನೆಯಲ್ಲಿ ಆನಾರೋಗ್ಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಜ್ಯೋತಿಷ ಹೇಳುತ್ತದೆ.
ಈ ಮನೆಯಲ್ಲಿ ವಾಸಿಸುವವರಿಗೆ ಅನಾರೋಗ್ಯ ಕಾಡುತ್ತದೆ. ಹೆಣ್ಣು ಮಕ್ಕಳಿಗೆ ಬಲಹೀನತೆ, ನರಗಳ ದೌರ್ಬಲ್ಯತ ಸಕ್ಕರೆ ಖಾಯಿಲೆ ಹಾಗೂ ಬಿಪಿಯಂತಹ ಕಾಯಿಲೆಗಳು ಕ್ರಮೇಣವಾಗಿ ಬರುತ್ತವೆ ಎಂದು ಜ್ಯೋತಿಷ ಹೇಳುತ್ತದೆ.
ಇದು ಸ್ತ್ರೀಯರ ಅಭಿವೃದ್ಧಿ ಮತ್ತು ಮಂಗಳ ಕಾರ್ಯಗಳಿಗೆ ಹಿನ್ನಡೆ ಉಂಟು ಮಾಡುತ್ತದೆ. ದಾಂಪತ್ಯ ಜೀವನದಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆಯೂ ಇದೆ ಎನ್ನುತ್ತೆ ಜ್ಯೋತಿಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.