ಬೆಂಗಳೂರು: ಭೀಮ ಜುವೆಲರ್ಸ್ ಕಂಪನಿಯು ಬೆಂಗಳೂರು ಸಮೀಪದ ಹೊಸೂರಿನಲ್ಲಿ ಹೊಸ ಮಳಿಗೆಯನ್ನು ಈಚೆಗೆ ಆರಂಭಿಸಿದೆ. ಇದು ತಮಿಳುನಾಡಿನಲ್ಲಿ ಭೀಮ ಜುವೆಲರ್ಸ್ನ ಎರಡನೆಯ ಮಳಿಗೆ.
ಕಂಪನಿಯ ನಿರ್ದೇಶಕಿ ಸಾವಿತ್ರಿ ಕೃಷ್ಣನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿಷ್ಣುಶರಣ್ ಕೆ. ಭಟ್ ಅವರು ಮಳಿಗೆ ಉದ್ಘಾಟಿಸಿದರು. ಈ ಮಳಿಗೆಯಲ್ಲಿ ಗ್ರಾಹಕರಿಗೆ ಸಮಕಾಲೀನ ಚಿನ್ನಾಭರಣ ಸಂಗ್ರಹಗಳು ಹಾಗೂ ಸಾಂಪ್ರದಾಯಿಕ ಚಿನ್ನಾಭರಣ ಸಂಗ್ರಹಗಳು ಲಭ್ಯವಿರಲಿವೆ ಎಂದು ಪ್ರಕಟಣೆ ತಿಳಿಸಿದೆ.
‘ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ಒದಗಿಸುವುದು ನಮ್ಮ ಗುರಿ’ ಎಂದು ವಿಷ್ಣುಶರಣ್ ಕೆ. ಭಟ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.