ADVERTISEMENT

ಭೀಮ ಜುವೆಲರ್ಸ್ ಮಳಿಗೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 4:04 IST
Last Updated 16 ಫೆಬ್ರುವರಿ 2023, 4:04 IST
   

ಬೆಂಗಳೂರು: ಭೀಮ ಜುವೆಲರ್ಸ್ ಕಂಪನಿಯು ಬೆಂಗಳೂರು ಸಮೀಪದ ಹೊಸೂರಿನಲ್ಲಿ ಹೊಸ ಮಳಿಗೆಯನ್ನು ಈಚೆಗೆ ಆರಂಭಿಸಿದೆ. ಇದು ತಮಿಳುನಾಡಿನಲ್ಲಿ ಭೀಮ ಜುವೆಲರ್ಸ್‌ನ ಎರಡನೆಯ ಮಳಿಗೆ.

ಕಂಪನಿಯ ನಿರ್ದೇಶಕಿ ಸಾವಿತ್ರಿ ಕೃಷ್ಣನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿಷ್ಣುಶರಣ್ ಕೆ. ಭಟ್ ಅವರು ಮಳಿಗೆ ಉದ್ಘಾಟಿಸಿದರು. ಈ ಮಳಿಗೆಯಲ್ಲಿ ಗ್ರಾಹಕರಿಗೆ ಸಮಕಾಲೀನ ಚಿನ್ನಾಭರಣ ಸಂಗ್ರಹಗಳು ಹಾಗೂ ಸಾಂಪ್ರದಾಯಿಕ ಚಿನ್ನಾಭರಣ ಸಂಗ್ರಹಗಳು ಲಭ್ಯವಿರಲಿವೆ ಎಂದು ಪ್ರಕಟಣೆ ತಿಳಿಸಿದೆ.

‘ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ಒದಗಿಸುವುದು ನಮ್ಮ ಗುರಿ’ ಎಂದು ವಿಷ್ಣುಶರಣ್ ಕೆ. ಭಟ್ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.