ADVERTISEMENT

ಆರ್‌ಬಿಐ ಕ್ರಮಕ್ಕೆ ಎಸ್‌ಆ್ಯಂಡ್‌ಪಿ ಮೆಚ್ಚುಗೆ

ಪಿಟಿಐ
Published 19 ನವೆಂಬರ್ 2020, 21:10 IST
Last Updated 19 ನವೆಂಬರ್ 2020, 21:10 IST

ನವದೆಹಲಿ : ಲಕ್ಷ್ಮೀ ವಿಲಾಸ್‌ ಬ್ಯಾಂಕ್‌ನ (ಎಲ್‌ವಿಬಿ) ವಿಚಾರವಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತ್ವರಿತವಾಗಿ ಕೈಗೊಂಡ ತೀರ್ಮಾನಗಳ ಕಾರಣದಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂದು ಎಸ್‌ಆ್ಯಂಡ್‌ಪಿ ರೇಟಿಂಗ್ಸ್‌ ಸಂಸ್ಥೆ ಹೇಳಿದೆ.

ಎಲ್‌ವಿಬಿಯನ್ನು ಸಿಂಗಪುರ ಮೂಲದ ಡಿಬಿಎಸ್‌ ಬ್ಯಾಂಕ್‌ನಲ್ಲಿ ವಿಲೀನ ಮಾಡುವ ಪ್ರಸ್ತಾವವನ್ನು ಆರ್‌ಬಿಐ ಸಿದ್ಧಪಡಿಸಿದೆ. ಈ ಕ್ರಮವು ಭಾರತದ ಬ್ಯಾಂಕಿಂಗ್ ವಲಯಕ್ಕೆ ಒಳ್ಳೆಯ ಸಂದೇಶ ರವಾನಿಸುತ್ತಿದೆ. ಎಲ್‌ವಿಬಿಗೆ ಅಗತ್ಯವಿದ್ದ ನಗದು ಲಭ್ಯತೆಯನ್ನು ತಂದುಕೊಡುತ್ತದೆ ಎಂದು ಎಸ್‌ಆ್ಯಂಡ್‌ಪಿ ಹೇಳಿದೆ.

ಎಲ್‌ವಿಬಿಯ ಮಾರುಕಟ್ಟೆ ಪಾಲು ಶೇಕಡ 0.2ರಷ್ಟು ಮಾತ್ರ. ‘ಎಲ್‌ವಿಬಿಗೆ ನೆರವಾಗಲು ವಿದೇಶಿ ಮೂಲದ ಬ್ಯಾಂಕ್‌ಅನ್ನು ಆಯ್ಕೆ ಮಾಡಿಕೊಂಡ ಆರ್‌ಬಿಐ ತೀರ್ಮಾನವು, ಬ್ಯಾಂಕಿಂಗ್‌ ವಲಯವನ್ನು ವಿದೇಶಿ ಸಂಸ್ಥೆಗಳ ಕೈಯಲ್ಲಿ ಇರಿಸಲು ತಾನು ಸಿದ್ಧ ಎಂಬ ಸಂದೇಶವನ್ನು ರವಾನಿಸುವಂತಿದೆ’ ಎಂದೂ ಎಸ್‌ಆ್ಯಂಡ್‌ಪಿ ಅಭಿಪ್ರಾಯ ವ್ಯಕ್ತಪಡಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.