ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಕಂಪನಿಯು ಮೂರು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಗುರುವಾರ ಹಕ್ಕಿನ ಷೇರು ವಿತರಣೆ ಮಾಡುವ ಕುರಿತು ಪರಿಗಣಿಸುವ ನಿರೀಕ್ಷೆ ಇದೆ. ಸಾಲವನ್ನು ತಗ್ಗಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಈ ನಿರ್ಧಾರಕ್ಕೆ ಮುಂದಾಗಿದೆ.
ಕಂಪನಿಯ ಆಡಳಿತ ಮಂಡಳಿ ಗುರುವಾರ ಸಭೆ ಸೇರಲಿದ್ದು, ಮಾರ್ಚ್ 31ರ ಅಂತ್ಯದ ಆರ್ಥಿಕ ಫಲಿತಾಂಶಕ್ಕೆ ಒಪ್ಪಿಗೆ ನೀಡಲಿದೆ. ಲಾಭಾಂಶ ನೀಡುವ ಬಗ್ಗೆಯೂ ಶಿಫಾರಸು ಮಾಡಲಿದೆ. ಈ ಕುರಿತು ಷೇರುಪೇಟೆಗೆ ಮಾಹಿತಿ ನೀಡಿದೆ.
2021ರ ವೇಳೆಗೆ ಸಾಲವನ್ನು ಶೂನ್ಯಕ್ಕೆ ಇಳಿಸುವ ಯೋಜನೆಯನ್ನು2019ರ ಆಗಸ್ಟ್ನಲ್ಲಿಯೇ ಮುಕೇಶ್ ಅಂಬಾನಿ ತಿಳಿಸಿದ್ದರು. ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಹಕ್ಕಿನ ಷೇರು ವಿತರಣೆ ಮೂಲಕ ಸದ್ಯದ ವಹಿವಾಟು ದರದಲ್ಲಿ ₹ 40 ಸಾವಿರ ಕೋಟಿ ಸಂಗ್ರಹವಾಗುವ ಸಾಧ್ಯತೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.