
ಅಯ್ಯಪ್ಪಸ್ವಾಮಿಯನ್ನು ಭಕ್ತಿಯಿಂದ ಪೂಜಿಸುವುದರಿಂದ ಶುಭ ಫಲಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ. ಅಯ್ಯಪ್ಪನ ಮಾಲಾಧಾರಿಗಳು ಶಬರಿಮಲೆಗೆ ಹೋಗುವಾಗ ತಪ್ಪದೇ ಒಂದು ಮಂತ್ರವನ್ನು ಪಠಿಸುವುದರಿಂದ ಒಳಿತಾಗುತ್ತದೆ ಎಂದ ಜ್ಯೋತಿಷಿಗಳು ತಿಳಿಸಿದ್ದಾರೆ. ಅದು ಯಾವ ಮಂತ್ರ ಎಂಬುದನ್ನು ನೋಡೋಣ.
ಅಯ್ಯಪ್ಪಸ್ವಾಮಿಯನ್ನು ಹುಲಿಯ ಮೇಲೆ ಕುಳಿತಿರುವವನು, ವೀರಾಧಿ ವೀರನು, ರಾಜಾದಿ ರಾಜನು ಎಂದೆಲ್ಲಾ ಭಜನೆಯಲ್ಲಿ ನೆನಪಿಸಿಕೊಳ್ಳುತ್ತಾರೆ.
ಮಾಲಾಧಾರಿಗಳು ಅಯ್ಯಪ್ಪಸ್ವಾಮಿಯ ಮಾಲೆಯನ್ನು ಧರಿಸಿದ 41 ದಿನಗಳ ಕಾಲ ಬೆಳಿಗ್ಗೆ ಮತ್ತು ಸಂಜೆ ಸ್ನಾನದ ನಂತರ ಪೂಜೆಯ ಸಮಯದಲ್ಲಿ ಭಜನೆ ಮಾಡುತ್ತಾರೆ.
ಮಂತ್ರ:
"ಓಂದೃಂ ನಮಃ ಪಾರಾಯ ಗೋಪ್ರೇ ನಮಃ ಎಂಬ ಮಂತ್ರವನ್ನು ಪಠಿಸಬೇಕು. ಈ ಮೇಲಿನ ಮಂತ್ರವು ಕಷ್ಟವಾದರೆ, ‘ಸ್ವಾಮಿಯೇ ಶ್ರೀ ಶರಣಂ ಅಯ್ಯಪ್ಪ’ ಎಂದು ಕನಿಷ್ಠ 108 ಬಾರಿ ಜಪಿಸಬೇಕು.
ಈ ಮಂತ್ರವನ್ನು ಶ್ರದ್ಧೆಯಿಂದ ಜಪಿಸಿದರೆ, ಸುಖ, ಶಾಂತಿ ಮತ್ತು ನೆಮ್ಮದಿ ಲಭಿಸುತ್ತದೆ ಎಂದು ಹೇಳಲಾಗುತ್ತದೆ.
41 ದಿನಗಳ ಅಯ್ಯಪ್ಪನ ವ್ರತ ಮುಗಿಸಿ ಬಂದ ಬಳಿಕ ಕೆಟ್ಟ ಚಟಗಳನ್ನು ಪ್ರಾರಂಭಿಸುವುದರಿಂದ ಕೆಡುಕಾಗುತ್ತದೆ. ವ್ರತಾಚರಣೆ ಮುಗಿದ ಕನಿಷ್ಠ 21 ದಿನಗಳ ಕಾಲ ಮಧ್ಯಪಾನ, ಧೂಮಾಪಾನ ಸೇರಿದಂತೆ ಕೆಟ್ಟ ಚಟಗಳಿಂದ ದೂರ ಇರುವುದು ಉತ್ತಮ.
ಇರುಮುಡಿಯಲ್ಲಿರುವ ತುಪ್ಪ ಗಟ್ಟಿಯಾಗದೆ ದ್ರವ ರೂಪದಲಿದ್ದರೆ, ವ್ರತಾಚರಣೆಯನ್ನು ಸರಿಯಾಗಿ ನೆರವೇರಿಸಿಲ್ಲ ಎಂದು ಹೇಳಲಾಗುತ್ತದೆ.
ಆದ್ದರಿಂದ ಅಯ್ಯಪ್ಪನ ಮಾಲೆ ಧರಿಸುವವರು ಶ್ರದ್ಧೆ ಭಕ್ತಿಯಿಂದ ವ್ರತ ಆಚರಣೆ ಮಾಡಬೇಕಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.