ADVERTISEMENT

ದೀಪಾವಳಿಗೆ ದೀಪಗಳನ್ನು ಹೀಗೆ ಬೆಳಗಿಸಿ: ಅದೃಷ್ಟ ನಿಮ್ಮದಾಗುತ್ತೆ

ಎಲ್.ವಿವೇಕಾನಂದ ಆಚಾರ್ಯ
Published 17 ಅಕ್ಟೋಬರ್ 2025, 7:10 IST
Last Updated 17 ಅಕ್ಟೋಬರ್ 2025, 7:10 IST
   

ದೀಪಾವಳಿಯ ಸಂದರ್ಭದಲ್ಲಿ ದೀಪ ಬೆಳಗಿಸುವುದು ಸಾಮಾನ್ಯ ಸಂಗತಿ. ದೀಪ ಬೆಳಗಿಸುವಾಗ ಕೆಲವು ತಪ್ಪುಗಳನ್ನು ಮಾಡಬಾರದು ಎಂದು ಜ್ಯೋತಿಷಿ ಎಲ್‌. ವಿವೇಕಾನಂದ ಆಚಾರ್ಯ ಹೇಳುತ್ತಾರೆ.

ಯಾವ ತಪ್ಪುಗಳನ್ನು ಮಾಡಬಾರದು?

  • ದೀಪಾವಳಿಯಂದು ಹಳೆಯ ಅಥವಾ ಹಿಂದಿನ ವರ್ಷ ಬಳಸಿದ ದೀಪಗಳನ್ನು ಮರು ಬಳಕೆ ಮಾಡಬಾರದು ಎಂದು ಜ್ಯೋತಿಷ ಹೇಳುತ್ತದೆ. 

    ADVERTISEMENT
  • ಭಿನ್ನವಾಗಿರುವ ಅಥವಾ ಒಡೆದು ಹೋಗಿರುವ ದೀಪಗಳನ್ನು ಹಚ್ಚಬಾರದು.

  • ಹೊಸ ಮಣ್ಣಿನ ದೀಪವನ್ನು ತೆಗೆದುಕೊಂಡು ಬಂದು ಶುದ್ಧ ಎಣ್ಣೆ ಹಾಗೂ ಹೊಸ ಬತ್ತಿ ಹಾಕಿ ದೀಪ ಹಚ್ಚುವುದು ಶುಭಕರ.

  • ಪ್ಲಾಸ್ಟಿಕ್, ಫೈಬರ್ ಅಥವಾ ವಿದ್ಯುತ್ ದೀಪಗಳನ್ನು ಬಳಸಬಾರದು. ಮಣ್ಣಿನ ದೀಪ ಹೆಚ್ಚು ಶ್ರೇಷ್ಠ. ಹಾಗಾಗಿ ಮಣ್ಣಿನ ದೀಪಗಳನ್ನು ಹೆಚ್ಚು ಬಳಸುವುದು ಸೂಕ್ತ. 

  • ದೀಪಾವಳಿಯಲ್ಲಿ ದೀಪ ಬೆಳಗಿಸುವ ಮುನ್ನ ಮನೆಯ ಮುಂದೆ ರಂಗೋಲಿ ಬಿಡುವುದನ್ನು ಶುಭ ಎಂದು ಹೇಳಲಾಗುತ್ತದೆ. 

  • ದೀಪಾವಳಿಯಂದು ಧನಲಕ್ಷ್ಮಿ ಹಾಗೂ ಗಣೇಶನನ್ನು ಪೂಜಿಸುವುದು ಶ್ರೇಷ್ಠ ಎಂದು ಪರಿಗಣಿಸಲಾಗಿದೆ. 

  • ದೀಪಾವಳಿಯಂದು ಹೊಸ ಬಟ್ಟೆ ಧರಿಸುವುದರಿಂದ ಶುಭ ಯೋಗ ಕೂಡಿ ಬರುತ್ತದೆ ಎಂದು ಅವರು ತಿಳಿಸಿದ್ದಾರೆ.

  • ‌ದೀಪಾವಳಿಯ ದಿನ ಸ್ನೇಹಿತರಿಗೆ ಸಂಬಂಧಿಕರಿಗೆ ಹಾಗೂ ನೆರೆಹೊರೆಯವರಿಗೆ ಸಿಹಿ ಹಂಚಿ ಹಬ್ಬವನ್ನು ಆಚರಣೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.