ADVERTISEMENT

ಲಕ್ಷ್ಮೀ ತುಳಸಿ–ವಿಷ್ಣು ತುಳಸಿ: ಯಾವುದನ್ನು ಪೂಜಿಸಿದರೆ ಹೆಚ್ಚು ಲಾಭ?

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 7:16 IST
Last Updated 2 ಡಿಸೆಂಬರ್ 2025, 7:16 IST
<div class="paragraphs"><p>ಚಿತ್ರ:ಎಐ</p></div>
   

ಚಿತ್ರ:ಎಐ

ತುಳಸಿ ಪೂಜೆಗೆ ಹಿಂದೂ ಸಂಪ್ರಾದಯದಲ್ಲಿ ಮಹತ್ತರ ಸ್ಥಾನ ನೀಡಲಾಗಿದೆ. ತುಳಸಿ ಗಿಡದಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ, ಲಕ್ಷ್ಮೀ ತುಳಸಿ ಹಾಗೂ ವಿಷ್ಣು ತುಳಸಿ. ಈ ಎರಡು ತುಳಸಿಗಳನ್ನು ಪೂಜಿಸುವುದರಿಂದ ಆಗುವ ಲಾಭಗಳೇನು ಎಂಬುದನ್ನು ತಿಳಿಯೋಣ.

  • ಈ ಎರಡು ತುಳಸಿ ಗಿಡಗಳನ್ನು ಪೂಜಿಸಿದರೆ ಮಾತ್ರ, ಲಕ್ಷ್ಮೀನಾರಾಯಣರ ಆಶೀರ್ವಾದ ದೊರೆಯುತ್ತದೆ ಎಂದು ಜ್ಯೋತಿಷದಲ್ಲಿ ತಿಳಿಸಿದೆ.

    ADVERTISEMENT
  • ಒಂದೇ ತುಳಸಿ ಗಿಡಕ್ಕೆ ಪೂಜಿಸುವುದರಿಂದ ಪೂಜೆ ಫಲ ಲಭಿಸುವುದಿಲ್ಲ. ಆ ಪೂಜೆಯು ವ್ಯರ್ಥಕ್ಕೆ ಸಮವಾಗಿದೆ.

  • ತುಳಸಿ ಗಿಡಕ್ಕೆ ಪೂಜೆ ಸಲ್ಲಿಸುವಾಗ ದೀಪ, ಅಗರ ಬತ್ತಿಗಳನ್ನು ತುಳಸಿ ಕಟ್ಟೆಯ ಕೆಳಗಡೆ ಹಚ್ಚಬಾರದು. ಇದರಿಂದ ಬೆಂಕಿಯ ಶಾಖ ತುಳಸಿ ಗಿಡಕ್ಕೆ ತಗುಲಿ ಗಿಡ ಬಾಡುತ್ತದೆ.

  • ತುಳಸಿ ಗಿಡವನ್ನು ಪ್ರತ್ಯೇಕವಾದ ಗೋಡು ಅಥವಾ ಕಟ್ಟೆ ಮಾಡಿಸಿ ಅಲ್ಲಿ ಇಡುವುದು ಸೂಕ್ತ. ಸದಾ ಓಡಾಡುವ ಸ್ಥಳದಲ್ಲಿ ಇಡಬಾರದು.

  • ತುಳಸಿ ದಳವನ್ನು ಕತ್ತರಿಯ ಅಥವಾ ಚಾಕು ಬಳಸಿ ಹರಿತವಾದ ವಸ್ತುಗಳಿಂದ ಕತ್ತರಿಸಬಾರದು. ಕೈಗಳಿಂದ ಮಾತ್ರವೇ ತುಳಸಿ ದಳ ಬಿಡಿಸಬೇಕು.

  • ತುಳಸಿಯನ್ನು ದಳ ಕೀಳುವಾದ ‘ಓಂ ನಮೋ ನಾರಾಯಣಾಯ’ ಎನ್ನುವ ಅಷ್ಟಾಕ್ಷರಿ ಮಂತ್ರ ಜಪಿಸಿ, ತುಳಸಿ ಬಿಡಿಸುವ ಮೊದಲು ಸ್ವಲ್ಪ ನೀರನ್ನು ಹಾಕಿ ನಂತರ ಬಿಡಿಸುವುದು ಸೂಕ್ತ ಎಂದು ಹೇಳಲಾಗುತ್ತದೆ.

  • ಯಾವುದೇ ಕಾರಣಕ್ಕೂ ಚಪ್ಪಲಿ ಹಾಕಿಕೊಂಡು ಅಥವಾ ಸ್ನಾನ ಮಾಡದೆ ತುಳಿಸಿ ಮುಟ್ಟುವುದಾಗಲಿ ಅಥವಾ ಕೀಳುವಾದಾಗಲಿ ಮಾಡಲೇಬಾರದು.

ತುಳಸಿ ದಳವನ್ನು ಯಾವಾಗ ಕೀಳಬಾರದು:

  • ಭಾನುವಾರ, ಮಂಗಳವಾರ, ಶುಕ್ರವಾರ, ಏಕಾದಶಿ, ದ್ವಾದಶಿ, ಹುಣ್ಣಿಮೆ ಹಾಗೂ ಅಮಾವಾಸ್ಯೆಯ ದಿನದಂದು ಯಾವುದೇ ಕಾರಣಕ್ಕೂ ತುಳಸಿ ದಳ ಕೇಳಬಾರದು. ಪೂಜೆಗಾಗಿ ಒಂದು ದಿವಸ ಮುಂಚಿತವೇ ಬಿಡಿಸಿ ಇಟ್ಟುಕೊಳ್ಳಬೇಕು.

  • ಸೂರ್ಯಾಸ್ತವಾದ ನಂತರ ತುಳಸಿಯನ್ನು ಕೀಳಬಾರದು.

  • ಮಾಂಸಹಾರ ಸೇವಿಸಿದವರು, ‌ಋತುದೋಷ, ಸೂತಕದ ಛಾಯೆ ಇರುವವರು ತುಳಸಿ ಗಿಡವನ್ನು ಮುಟ್ಟಬಾರದು.

  • ಈ ನಿಯಮಗಳನ್ನು ಅನುಸರಿಸಿ ತುಳಸಿಯನ್ನು ನಿಷ್ಠೆಯಿಂದ ಪೂಜೆ ಮಾಡಿದರೆ ಶ್ರೀ ಲಕ್ಷ್ಮೀನಾರಾಯಣರ ಕೃಪೆ ನಿಮಗೆ ದೊರೆಯುತ್ತದೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ.

  • ಯಾವುದೇ ಕಾರಣಕ್ಕೂ ಗಣಪತಿಗೆ ತುಳಸಿಯನ್ನು ಅರ್ಪಿಸಬಾರದು ಎಂದು ಹೇಳಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.