ಬಾಗಲಕೋಟೆ: ವಕೀಲೆ ವಕೀಲೆ ಸಂಗೀತಾ ಶಿಕ್ಕೇರಿ ಅವರು ತಮ್ಮ ಮೇಲೆ ಹಲ್ಲೆಗೂ ಮೊದಲೇ ಆರೋಪಿ ಮಹಾಂತೇಶ ಚೊಳಚಗುಡ್ಡ ಅವರಿಗೆ ಚಪ್ಪಲಿಯಲ್ಲಿ ಹೊಡೆದಿರುವ ವಿಡಿಯೊ ನಗರದಲ್ಲಿ ಮಂಗಳವಾರ ವೈರಲ್ ಆಗಿದೆ.
ಇದರಿಂದ ವಕೀಲೆಯ ಮೇಲಿನ ಹಲ್ಲೆ ಪ್ರಕರಣಕ್ಕೆ ಮತ್ತೊಂದು ತಿರುವು ದೊರೆತಿದೆ. ಇಲ್ಲಿನ ವಿನಾಯಕ ನಗರದಲ್ಲಿರುವ ನಡೆದಿದ್ದ ಘಟನೆ ಕುರಿತ ವಿಡಿಯೊ ವೈರಲ್ ಆಗಿತ್ತು. ಹೊಸ ವಿಡಿಯೊದಲ್ಲಿ ಮಹಾಂತೇಶ –ಸಂಗೀತಾ ವಾಗ್ವಾದ ನಡೆಸಿದ್ದು, ವಕೀಲೆ ಚಪ್ಪಲಿಯಿಂದ ಹೊಡೆಯುವುದು ದಾಖಲಾಗಿದೆ.
ಸಂಗೀತಾ ಶಿಕ್ಕೇರಿ ಸದ್ಯ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗೆ ಮಹಾಂತೇಶಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರಾಜ್ಯ ಮಾನವ ಹಕ್ಕು ಆಯೋಗಕ್ಕೂ ಈ ಕುರಿತು ದೂರು ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.