
ಜಮಖಂಡಿ: ಹಿಂದೂ-ಮುಸ್ಲಿಂ ಬಾಂಧವರು ಮೊದಲಿನಿಂದಲೂ ಸಹೋದರತ್ವದಿಂದ ಬದುಕುತ್ತಿದ್ದಾರೆ. ಜಾತಿ ವೈಷಮ್ಯಕ್ಕೆ ಯಾರೂ ಅವಕಾಶ ನೀಡುವುದಿಲ್ಲ ಎಂದು ಅಂಜುಮನ್ ಕಮಿಟಿಯ ನೂತನ ಅಧ್ಯಕ್ಷ ತೌಫೀಕ ಪಾರ್ಥನಳ್ಳಿ ಹೇಳಿದರು.
ಇಲ್ಲಿನ ಖಾಸಗಿ ನಿವಾಸದಲ್ಲಿ ಅಂಜುಮನ್ ಕಮಿಟಿಯ ನೂತನ ಪದಾಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ನೂತನ ಕಾರ್ಯಾಧ್ಯಕ್ಷ ನಜೀರ ಕಂಗನೊಳ್ಳಿ, ಉಪಾಧ್ಯಕ್ಷರಾದ ರಿಯಾಜ ಅವಟಿ, ಅಲ್ತಾಪ ಭಾಗವಾನ ಸನ್ಮಾನಿಸಲಾಯಿತು.
ಹಾಜಿ ಬಾಬು ಸಗರ, ಅಲ್ತಾಫ್ ಸಗರ, ಇಂತಿಯಾಜ್ ಸಗರ, ಬಾರ್ಪೆಟ್ ಮಕಾ ಮಸೀದಿ ಅಧ್ಯಕ್ಷ ಸರ್ಫ್ರಾಜ್ ಪಠಾಣ, ಉಸ್ಮಾನ್ ಮಕಾಂದಾರ್, ಅಯಾಜ್ ಶೇಖ್, ಮುಸ್ಸೇಬ್ ಸಗರ, ರಶೀದ ಆಲಗೂರ, ಕಮರೋದಿನ್ ಮುರ್ಸಲ, ವಶೀಮ್ ಕೊಕಟನೂರ, ಫಾರೂಕ್ ಜಮಾದಾರ, ಮೌಲಾನಾ ಮಂಜುರ್ ಅವಟಿ, ಅಬೂಬಕರ್ ಕುಡಚಿ, ಪೈಸಲ್ ದ್ರಾಕ್ಷಿ, ಪಪ್ಪು ಮನಿಯಾರ, ಮುಬಾರಕ್ ಶಿರೋಳ, ಹುಸೇನ್ ತಾಂಬೋಳಿ, ಮಲ್ಲಿಕಾರ್ಜುನ ನ್ಯಾಮಗೌಡ, ಇಸಾಕ್ ನಿಪ್ಪಾಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.