ಹೊಸಪೇಟೆ: ನಗರದ ಅಶ್ವತ್ಥ ನಾರಾಯಣ ಕಟ್ಟೆಯಲ್ಲಿ ಶನಿವಾರ 50 ಅಡಿ ಎತ್ತರದ ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಲಾಯಿತು.
ನಿಂತು ಆಶೀರ್ವದಿಸುತ್ತಿರುವ ಭಂಗಿಯಲ್ಲಿರುವ ಆಂಜನೇಯ ಮೂರ್ತಿಯನ್ನು ಅಶ್ವತ್ಥನಾರಾಯಣ ಕಟ್ಟೆ ಹಾಗೂ ಆಂಜನೇಯ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಕೂರಿಸಲಾಗಿದೆ.
ನೆರೆದಿದ್ದ ನೂರಾರು ಜನರ ಜಯಘೋಷಗಳ ನಡುವೆ ಕ್ರೇನ್ ಸಹಾಯದಿಂದ ಆಂಜನೇಯ ಮೂರ್ತಿಗೆ ತುಳಸಿ ಹಾರ ಹಾಕಲಾಯಿತು.
ದೇವಸ್ಥಾನದ ಟ್ರಸ್ಟ್ನ ಹಿರಿಯ ಮುಖಂಡರಾದ ಕೊಟ್ರೇಶಪ್ಪ, ರಾಮನಗೌಡ, ಪಂಪಾಪತಿ, ಬಣಗಾರ ಗೌರೀಶ್, ಪಂಪಾಪತಿ, ಮುಖಂಡ ಮೊಹಮ್ಮದ್ ಇಮಾಮ್ ನಿಯಾಜಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.