
ತೆಕ್ಕಲಕೋಟೆ (ಬಳ್ಳಾರಿ ಜಿಲ್ಲೆ): ಆದಿಮಾನವನ ಅಸ್ಥಿಪಂಜರಗಳು ಸಿಕ್ಕಿರುವ ವಿಷಯ ತಿಳಿಯುತ್ತಿದ್ದಂತೆಯೇ ತೆಕ್ಕಲಕೋಟೆಯ ಗೌಡ್ರಮೂಲೆ ಬೆಟ್ಟ ಪ್ರದೇಶಕ್ಕೆ ಸೋಮವಾರ ಭಾರಿ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದರು.
ಇದರಿಂದ ಉತ್ಖನನಕ್ಕೆ ಅಡ್ಡಿಯಾಯಿತು. ಶಾಲಾ ವಿದ್ಯಾರ್ಥಿಗಳು, ಅಧ್ಯಯನಾಸಕ್ತರು, ಸ್ಥಳೀಯ ಗ್ರಾಮಸ್ಥರು, ಮುಖಂಡರು, ರಾಜಕೀಯ ವ್ಯಕ್ತಿಗಳು ಉತ್ಖನನ ವೀಕ್ಷಿಸಿದರು.
ಜನರ ವರ್ತನೆಯಿಂದ ಬೇಸರಗೊಂಡ ಉತ್ಖನನ ತಂಡದ ಸಹನಿರ್ದೇಶಕಿ ನಮಿತಾ ಎಸ್. ಸುಗಂಧಿ ಅವರು ಕಣ್ಣೀರಿಟ್ಟರು.
‘ಇಲ್ಲಿ ಉತ್ಖನನಕ್ಕೆ ನಮಗೆ 2–3 ದಿನಗಳಷ್ಟೇ ಅವಕಾಶವಿದೆ. ದಯವಿಟ್ಟು ಸಹಕರಿಸಿ. ನಮ್ಮ ಕಾರ್ಯಾಚರಣೆ ಬಳಿಕ ಇತಿಹಾಸ ಅಧ್ಯಯನಾಸಕ್ತರು ಉತ್ಖನನ ನಡೆಸಿದರೆ, ಹೆಚ್ಚಿನ ಮಾಹಿತಿ ಜಗತ್ತಿಗೆ ಗೊತ್ತಾಗಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.