ADVERTISEMENT

ಬಳ್ಳಾರಿ ಜಿಲ್ಲೆಯಲ್ಲಿ ಭಾರಿ ಮಳೆ: 350 ಎಕರೆ ಬೆಳೆ ನಷ್ಟ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 12:52 IST
Last Updated 11 ಅಕ್ಟೋಬರ್ 2020, 12:52 IST
ಸಂಡೂರು ತಾಲ್ಲೂಕಿನ ದರೋಜಿ ಕೆರೆ ಪಕ್ಕದ ಭತ್ತದ ಗದ್ದೆಗೆ ನೀರು ನುಗ್ಗಿರುವುದು
ಸಂಡೂರು ತಾಲ್ಲೂಕಿನ ದರೋಜಿ ಕೆರೆ ಪಕ್ಕದ ಭತ್ತದ ಗದ್ದೆಗೆ ನೀರು ನುಗ್ಗಿರುವುದು   
""

ಹೊಸಪೇಟೆ: ಭಾರಿ ಮಳೆಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿ 350 ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಬೆಳೆ ನಷ್ಟವಾಗಿದೆ.

ಶನಿವಾರ ರಾತ್ರಿ ಭಾರಿ ಮಳೆಯಾಗಿದೆ. ಭಾನುವಾರವೂ ಮಳೆಯ ಆರ್ಭಟ ಮುಂದುವರಿಯಿತು. ನಾರಿಹಳ್ಳ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಹರಿಸಿದ್ದರಿಂದ ನೆರೆ ಬಂದು ಕುರೇಕುಪ್ಪ, ವಡ್ಡು, ಬಸಾಪುರ, ತಾಳೂರು, ಬನ್ನಿಹಟ್ಟಿ, ನಾಗಲಾಪುರ, ಬನ್ನಿಹಟ್ಟಿ ಮತ್ತು ತಾರಾನಗರದಲ್ಲಿ ಬೆಳೆ ನಷ್ಟವಾಗಿದೆ.

ದರೋಜಿ ಕೆರೆ ಎರಡನೇ ಸಲ ತುಂಬಿ ಕೋಡಿ ಬಿದ್ದಿರುವುದರಿಂದ ಗ್ರಾಮದ ಸುತ್ತಮುತ್ತಲಿನ ಬೆಳೆ ಹಾಳಾಗಿದೆ. ಭತ್ತ, ಮೆಣಸಿನಕಾಯಿ, ಹತ್ತಿ, ಜೋಳ, ಕರಿಬೇವು, ಕಲ್ಲಂಗಡಿ ಸೇರಿದಂತೆ ಇತರೆ ಬೆಳೆಗಳನ್ನು ರೈತರು ಬೆಳೆಸಿದ್ದಾರೆ.

ADVERTISEMENT

ಹೊಸಪೇಟೆಯಲ್ಲಿ ಶನಿವಾರ ರಾತ್ರಿ ಸುರಿದಿದ್ದ ಮಳೆ, ಭಾನುವಾರ ಸಂಜೆಯ ವರೆಗೆ ಬಿಡುವು ಕೊಟ್ಟಿತ್ತು. ಸಂಜೆಯ ನಂತರ ಬಿರುಸಾಗಿ ಸುರಿಯಿತು. ಕೂಡ್ಲಿಗಿ, ಕೊಟ್ಟೂರಿನಲ್ಲೂ ಮಳೆಯಾಗಿದೆ.

ಸಂಡೂರು ತಾಲ್ಲೂಕಿನ ದರೋಜಿ ಕೆರೆಗೆ ಕೋಡಿ ಬಿದ್ದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.