ADVERTISEMENT

ಹೊಸಕೋಟೆ: ಸಿಪಿಐ(ಎಂ) ಸಮ್ಮೇಳನ ಇಂದು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 6:10 IST
Last Updated 28 ನವೆಂಬರ್ 2021, 6:10 IST

ಹೊಸಕೋಟೆ: ಸಿಪಿಐ(ಎಂ)ನ 4ನೇ ತಾಲ್ಲೂಕು ಸಮ್ಮೇಳನವು ನಗರದ ವೆಂಕಟಾದ್ರಿ ಪಾರ್ಟಿ ಹಾಲ್‌ನಲ್ಲಿ ಇದೇ 28ರಂದು ನಡೆಯಲಿದೆ ಎಂದು ತಾಲ್ಲೂಕು ಕಾರ್ಯದರ್ಶಿ ಆರ್‌.ಆರ್‌. ಮನೋಹರ್‌ ತಿಳಿಸಿದ್ದಾರೆ.

ತಾಲ್ಲೂಕಿನ ಸಮಗ್ರ ಅಭಿವೃದ್ಧಿ, ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಕೆಲಸದ ಅವಕಾಶ, ಕಾರ್ಮಿಕರ ಹಕ್ಕುಗಳ ಉಳಿವು, ವಿದ್ಯುತ್ ಖಾಸಗೀಕರಣದ ವಿರುದ್ಧ ಹೋರಾಟ ಸಂಬಂಧ ಚರ್ಚಿಸಲಾಗುವುದು.

ಜಿಲ್ಲೆ ಹಾಗೂ ರಾಜ್ಯ ಮಟ್ಟದ ನಾಯಕರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.