ADVERTISEMENT

ವಿಶೇಷ ಚೇತನ ವ್ಯಕ್ತಿಯನ್ನು ಚಾಕುವಿನಿಂದ ಕೊಲೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2023, 6:38 IST
Last Updated 19 ಏಪ್ರಿಲ್ 2023, 6:38 IST

ದೊಡ್ಡಬಳ್ಳಾಪುರ: ವಿಶೇಷ ಚೇತನ ವ್ಯಕ್ತಿಯನ್ನು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಬೈರಾಪುರ ತಾಂಡ ಗೇಟ್ ಸಮೀಪ ಮಂಗಳವಾರ ನಡೆದಿದೆ.

ಮೃತನನ್ನು ಬೊಮ್ಮನಹಳ್ಳಿ ನಿವಾಸಿ ವೆಂಕಟಪ್ಪ(50) ಎಂದು ಗುರುತಿಸಲಾಗಿದೆ. ಈತ ವಿಶೇಷ ಚೇತನ ವ್ಯಕ್ತಿಯಲ್ಲದೆ, ನಿರ್ಗತಿಕ ಎನ್ನಲಾಗಿದೆ. ಈ ವ್ಯಕ್ತಿಯನ್ನು ಯಾವ ಕಾರಣಕ್ಕೆ ಹತ್ಯೆ ಮಾಡಿದ್ದಾರೆ ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ.

ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.