ADVERTISEMENT

ಆನೆ ಮರಿಗೆ ಸಿದ್ಧಗಂಗಾ ಶ್ರೀಗಳಿಂದ ನಾಮಕರಣ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 6:27 IST
Last Updated 24 ಜನವರಿ 2021, 6:27 IST
ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಭೇಟಿ ನೀಡಿ ಆನೆ ಮರಿಯೊಂದಕ್ಕೆ ‘ಬಸವ’ ಎಂದು ನಾಮಕರಣ ಮಾಡಿದರು
ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಭೇಟಿ ನೀಡಿ ಆನೆ ಮರಿಯೊಂದಕ್ಕೆ ‘ಬಸವ’ ಎಂದು ನಾಮಕರಣ ಮಾಡಿದರು   

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆ ಮರಿಯೊಂದಕ್ಕೆ ಸಿದ್ಧಗಂಗಾ ಮಠಾಧೀಶರಾದ ಸಿದ್ಧಲಿಂಗ ಸ್ವಾಮೀಜಿ ಅವರು ಬಸವ ಎಂದು ನಾಮಕರಣ ಮಾಡಿದರು.

ರೂಪಾ ಎಂಬ ಆನೆ ಮರಿಗೆ ಜನಿಸಿದ್ದ ಆರು ತಿಂಗಳ ಆನೆ ಮರಿಗೆ ಸ್ವಾಮೀಜಿ ಬಸವ ಎಂದು ಹೆಸರಿಟ್ಟಿದ್ದಾರೆ. ಬನ್ನೇರುಘಟ್ಟ ಉದ್ಯಾನಕ್ಕೆ ಸಂಜೆ 4ರ ವೇಳೆಗೆ ಆಗಮಿಸಿದ ಸ್ವಾಮೀಜಿ ಉದ್ಯಾನ ವೀಕ್ಷಿಸಿದರು. ಆನೆ ಸಫಾರಿಗೆ ಭೇಟಿ ನೀಡಿ ಮಾವುತರಿಗೆ ಮತ್ತು ಪ್ರಾಣಿಗಳಿಗೆ ಹಣ್ಣುವಿತರಿಸಿದರು.

ಉದ್ಯಾನದ ಕಾರ್ಯನಿರ್ವಹಣಾಧಿಕಾರಿ ವನಶ್ರೀ ವಿಪಿನ್‌ ಸಿಂಗ್‌ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.