ADVERTISEMENT

ಈ ಬಾರಿ ದಾಖಲೆ ಗೆಲುವು: ಬಸವರಾಜ ಹೊರಟ್ಟಿ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 6:48 IST
Last Updated 15 ಜೂನ್ 2022, 6:48 IST
ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ
ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ    

ಬೆಳಗಾವಿ: 'ಈ ಬಾರಿ ದಾಖಲೆ ಗೆಲುವು ಸಾಧಿಸುವೆ' ಎಂದು ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ಜ್ಯೋತಿ ಕಾಲೇಜಿನಲ್ಲಿ ನಡೆದಿರುವ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, 'ಚುನಾವಣೆ ಸಂದರ್ಭ ಸಾಕಷ್ಟು ಆರೋಪ ಪ್ರತ್ಯಾರೋಪ ಕೇಳಿದ್ದೇನೆ. ಆರೋಪಗಳು ನನಗೇನೂ ಹೊಸದಲ್ಲ. ಇನ್ನು ಒಂದೆರೆಡು ಗಂಟೆಯಲ್ಲಿ ಯಾರ ಹಣೆಬರಹ ಏನು ಎಂದು ಗೊತ್ತಾಗಲಿದೆ' ಎಂದರು.

ನಾನು ನಂಬಿರುವ ಶಿಕ್ಷಕರು ನನ್ನ ಕೈಬಿಡುವುದಿಲ್ಲ: ಬಸವರಾಜ ಗುರಿಕಾರ
'ನಾನು ನಂಬಿರುವ ಶಿಕ್ಷಕರು ನನ್ನ ಕೈಬಿಡುವುದಿಲ್ಲ. ದಬ್ಬಾಳಿಕೆ, ಹಣದ ಪ್ರಭಾವಕ್ಕೆ ಮತದಾರರು ಒಳಗಾಗಿಲ್ಲ. ಹೀಗಾಗಿ ನನ್ನ ಗೆಲುವು ನಿಶ್ಚಿತ' ಎಂದು ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿಯ ಜ್ಯೋತಿ ಕಾಲೇಜಿನಲ್ಲಿ ನಡೆದಿರುವ ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, 'ಶಿಕ್ಷಕರು ಬದಲಾವಣೆ ಬಯಸಿದ್ದಾರೆ. ಅದು ಈ ಚುನಾವಣೆಯಲ್ಲಿ ಸಾಬೀತಾಗಲಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.