ಬೆಳಗಾವಿ: ಗೋವಾದಿಂದ ಉತ್ತರ ಭಾರತದ ವಿವಿಧಡೆ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹37 ಲಕ್ಷ ಮೌಲ್ಯದ ಮದ್ಯವನ್ನು ಅಬಕಾರಿ ಸಿಬ್ಬಂದಿ ಗುರುವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.
16 ಚಕ್ರದ ಲಾರಿಯಲ್ಲಿ ಮಶ್ರೂಮ್ನ ಬೀಜ ಹಾಗೂ ಮಣ್ಣು ಮಿಶ್ರಣ ತುಂಬಿದ ಚೀಲಗಳನ್ನು ಹೇರಿ, ಅದರ ಕೆಳಗಡೆ ಮದ್ಯದ ಬಾಕ್ಸ್ಗಳನ್ನು ಇಟ್ಟು ಕಳ್ಳಸಾಗಣೆ ಮಾಡಲಾಗುತಿತ್ತು.
‘ಸವದತ್ತಿ ತಾಲ್ಲೂಕಿನ ಕಡಬಿ ಶಿವಾಪುರದ ಅದಮ್ ಕುತುಬುದ್ದಿನ್ ಮುಗುಟಖಾನ್ (28) ಮತ್ತು ಬಾಗಲಕೋಟೆ ಜಿಲ್ಲೆ ಹೊನ್ನಾಕಟ್ಟಿ ಗ್ರಾಮದ ಆಸೀಫ್ ರೆಹಮಾನಸಾಬ್ ಯಲಗಾರ (27) ಬಂಧಿತರು. ₹27 ಲಕ್ಷ ಮೌಲ್ಯದ 600 ಬಾಕ್ಸ್ ಮದ್ಯ, ₹10 ಲಕ್ಷ ಮೌಲ್ಯದ ಬಿಯರ್ ಮತ್ತು ₹30 ಲಕ್ಷ ಮೌಲ್ಯದ ಲಾರಿ ಸೇರಿ ₹67 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ.ವೈ.ಮಂಜುನಾಥ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.