ADVERTISEMENT

ಗೋಕಾಕ | ರಸ್ತೆ ಕಾಮಗಾರಿ ಗುಣಮಟ್ಟ ತೆರೆದಿಟ್ಟ ಮಳೆ

​ಪ್ರಜಾವಾಣಿ ವಾರ್ತೆ
Published 10 ಮೇ 2020, 8:40 IST
Last Updated 10 ಮೇ 2020, 8:40 IST
ಗೋಕಾಕದ ಬಸ್ ನಿಲ್ದಾಣ ರಸ್ತೆಯಲ್ಲಿ ಮಳೆ ನೀರು ಸಂಗ್ರಹವಾಗಿದ್ದ ದೃಶ್ಯ
ಗೋಕಾಕದ ಬಸ್ ನಿಲ್ದಾಣ ರಸ್ತೆಯಲ್ಲಿ ಮಳೆ ನೀರು ಸಂಗ್ರಹವಾಗಿದ್ದ ದೃಶ್ಯ   

ಗೋಕಾಕ: ಭಾನುವಾರ ಬೆಳಗಿನ ಜಾವ ಅರ್ಧ ತಾಸು ಸುರಿದ ಧಾರಾಕಾರ ಮಳೆ ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಿಗೆ ತಂಪೆರೆಯುವ ಜೊತೆಗೆ, ಇಲ್ಲಿ ಈಚೆಗಷ್ಟೇ ನಡೆದಿದ್ದ ಬಸ್ ನಿಲ್ದಾಣದ ರಸ್ತೆ ಅಭಿವೃದ್ಧಿಯ ಕಾಮಗಾರಿಯ ಗುಣಮಟ್ಟವನ್ನೂ ತೆರದಿಟ್ಟಿದೆ.

ರಸ್ತೆಗಿಂತಲೂ ಚರಂಡಿಯ ಎತ್ತರ ಹೆಚ್ಚಿಸಿದ್ದರಿಂದ ನೀರು ಸರಾಗವಾಗಿ ಹರಿದು ಹೋಗದೇ ರಸ್ತೆಯಲ್ಲೇ ಸಂಗ್ರಹಗೊಂಡಿದ್ದು ಕಂಡುಬಂತು. ನಗರಸಭೆ ವ್ಯಾಪ್ತಿಯ ಬಹುತೇಕ ರಸ್ತೆಗಳ ಮೂಲಕ ಸಾಗುವಾಗ ಇದನ್ನು ಗಮನಿಸಬಹುದಾಗಿದೆ.

‘ಕಳಪೆ ಕಾಮಗಾರಿ ನಡೆದಿರುವುದು ನಗರಸಭೆ ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲವೇ?’ ಎಂದು ನಾಗರಿಕರು ಕೇಳುತ್ತಿದ್ದಾರೆ. ಕ್ರಮಕ್ಕೆ ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.