ADVERTISEMENT

ಬೆಳಗಾವಿಗೆ ಯಡಿಯೂರಪ್ಪ: ಕತ್ತಿ ಸೋದರರ ಜೊತೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 5:19 IST
Last Updated 1 ಏಪ್ರಿಲ್ 2019, 5:19 IST
   

ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡಿರುವ ರಮೇಶ್ ಕತ್ತಿ ಹಾಗೂ ಅವರ ಸಹೋದರ, ಶಾಸಕ ಉಮೇಶ ಕತ್ತಿ ಅವರ ಜೊತೆ ಚರ್ಚಿಸಲು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬೆಳಗಾವಿಗೆ ಆಗಮಿಸಿದ್ದಾರೆ.

ನಗರದಲ್ಲಿರುವ ಕತ್ತಿ ಅವರ ಒಡೆತನದ ಯು.ಕೆ 27 ಹೋಟೆಲ್ ನಲ್ಲಿ ಕತ್ತಿ ಸಹೋದರರು ಸೇರಿದಂತೆ ಜಿಲ್ಲೆಯ ಮುಖಂಡರ ಜೊತೆ ಉಪಾಹಾರ ಸೇವಿಸುತ್ತಿದ್ದಾರೆ. ಉಪಾಹಾರದ ನಂತರ ಮಾತುಕತೆ ನಡೆಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT