ಬೆಂಗಳೂರು: ಕೋಡಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ತಪಾಸಣೆಗೆ ಹೋಗಿದ್ದ ವೈದ್ಯರ ಮೇಲೆ ಹಲ್ಲೆ ಮಾಡಲಾಗಿದ್ದು, ಈ ಬಗ್ಗೆ ದೂರು ದಾಖಲಾಗಿದೆ.
‘ವೈದ್ಯರ ನೇತೃತ್ವದ ತಂಡಗಳು ಹಲವು ದಿನಗಳಿಂದ ಸೋಂಕು ತಪಾಸಣೆ ಮಾಡುತ್ತಿದೆ. ಗುರುವಾರ ತಪಾಸಣೆಗೆ ಹೋಗಿದ್ದ ವೇಳೆ ಅವರ ಮೇಲೆ ಹಲ್ಲೆ ನಡೆದಿದೆ’ ಎಂದು ಪೊಲೀಸರು ಹೇಳಿದರು.
‘ತಪಾಸಣೆ ಮಾಡಲು ನೀವು ಯಾರು’ ಎಂದು ಸ್ಥಳೀಯ ನಿವಾಸಿಗಳಾದ ಕೇಶವ್, ಜಯರಾಮ್ ಹಾಗೂ ನಾರಾಯಣ್ ಪ್ರಶ್ನಿಸಿದರು. ಜನರ ಆರೋಗ್ಯ ರಕ್ಷಣೆಗೆ ಬಂದಿರುವುದಾಗಿ ವೈದ್ಯರು ಹೇಳಿದ್ದರು. ಅಷ್ಟಕ್ಕೇ ಕೋಪಗೊಂಡ ಮೂವರು, ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ. ವೈದ್ಯರ ಕೈಗೆ ಗಾಯವಾಗಿದೆ. ಅವರ ಕನ್ನಡಕ ಸಹ ಒಡೆದು ಹೋಗಿದೆ' ಎಂದೂ ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.