ADVERTISEMENT

ಪಾದಚಾರಿ ಮಾರ್ಗ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 20:06 IST
Last Updated 14 ಸೆಪ್ಟೆಂಬರ್ 2019, 20:06 IST
ಪಾದಚಾರಿ ಮಾರ್ಗದಲ್ಲಿ ಇದ್ದ ಗೂಡಂಗಡಿ ತೆರವುಗೊಳಿಸಿದ ಬಿಬಿಎಂಪಿ ಸಿಬ್ಬಂದಿ
ಪಾದಚಾರಿ ಮಾರ್ಗದಲ್ಲಿ ಇದ್ದ ಗೂಡಂಗಡಿ ತೆರವುಗೊಳಿಸಿದ ಬಿಬಿಎಂಪಿ ಸಿಬ್ಬಂದಿ   

ಬೆಂಗಳೂರು: ಯಲಹಂಕ ಮತ್ತು ಮಹದೇವಪುರ ವಲಯಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿಯನ್ನು ಬಿಬಿಎಂಪಿ ಅಧಿಕಾರಿಗಳುಶನಿವಾರ ತೆರವುಗೊಳಿಸಿದರು.

ಹೂಡಿ ಉಪವಿಭಾಗದ ಕುಂದಲಹಳ್ಳಿ ಕಾಲೊನಿಯ ಐಟಿಪಿಎಲ್ ಮುಖ್ಯರಸ್ತೆ ಮತ್ತು ‌ಬ್ಯಾಟರಾಯನಪುರ ವಿಭಾಗ ಸೇರಿ ಒಟ್ಟು 18 ಶಾಶ್ವತ ಮತ್ತು 25 ತಾತ್ಕಾಲಿಕ ಒತ್ತುವರಿಗಳನ್ನು ತೆರವುಗೊಳಿಸಲಾಯಿತು. ಒತ್ತುವರಿ ಮುಂದುವರಿಸಿದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮುಖ್ಯ ಎಂಜಿನಿಯರ್ ಆರ್.ಎಲ್. ಪರಮೇಶ್ವರಯ್ಯ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT