
ಸುದೀಪ್ತ ಜಿ. ಮತ್ತು ಪ್ರೀತಿ ಚೌಧರಿ
ಬೆಂಗಳೂರು: ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಷನ್ ಟ್ರಸ್ಟ್ ಹಾಗೂ ಅಲಂಕೃತ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಇದೇ 28ರಂದು ಸಂಜೆ 5 ಗಂಟೆಗೆ ಜಯನಗರದ 5ನೇ ಬ್ಲಾಕ್ನಲ್ಲಿರುವ ಸನಾತನ ಕಲಾಕ್ಷೇತ್ರದಲ್ಲಿ ‘ಕಲಾ ಸ್ಪಂದನ’ ಶಾಸ್ತ್ರೀಯ ಸಂಗೀತ–ನೃತ್ಯ ತಿಂಗಳ ಕಾರ್ಯಕ್ರಮ ಹಮ್ಮಿಕೊಂಡಿದೆ.
ಸುದೀಪ್ತ ಜಿ. ಮತ್ತು ಪ್ರೀತಿ ಚೌಧರಿ ಅವರಿಂದ ಕಥಕ್ ನೃತ್ಯ ಪ್ರದರ್ಶನ ಆಯೋಜಿಸಲಾಗಿದೆ. ಪೂರ್ಣಾ ಹೆಬ್ಬಾರ್, ಪ್ರಜ್ಞಾ ಹೆಬ್ಬಾರ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ನಡೆಯಲಿದ್ದು, ರೋಹನ್ ಕುಮಾರ್ ತಬಲಾದಲ್ಲಿ ಸಾಥ್ ನೀಡಲಿದ್ದಾರೆ.
ಬೆಂಗಳೂರು: ಸಂಧ್ಯಾ ಜನ ಸಂಸ್ಕೃತಿ ಟ್ರಸ್ಟ್ ಇದೇ 28ರಂದು ತನ್ನ 8ನೇ ವರ್ಷದ ವಾರ್ಷಿಕೋತ್ಸದ ಅಂಗವಾಗಿ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಗಾಯನ ಹಾಗೂ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.
ಸಂಜೆ 4 ಗಂಟೆಗೆ ಪಿ.ರುದ್ರಪ್ಪ ಮತ್ತು ತಂಡದಿಂದ ಗೀತ ಗಾಯನ ನಡೆಯಲಿದೆ. ಸಂಜೆ 6.30ರಿಂದ ‘ಪಶ್ಚಾತಾಪ’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಫೋಟೋ ವೆಂಕಿ ಈ ನಾಟಕ ರಚಿಸಿ ನಿರ್ದೇಶಿಸಿದ್ದಾರೆ.
ಬೆಂಗಳೂರು: ಕುಂದಾಪುರದ ನಾದಾವಧಾನ ಪ್ರತಿಷ್ಠಾನವು ಇದೇ 28ರಂದು ಬೆಳಿಗ್ಗೆ 10ರಿಂದ ರಾಜಾಜಿನಗರದ ಚಿತ್ಪಾವನ ಸಭಾಭವನದಲ್ಲಿ ಬಡಗುತಿಟ್ಟು ಹಿಮ್ಮೇಳ ಕಾರ್ಯಾಗಾರ ಹಮ್ಮಿಕೊಂಡಿದೆ. ಆಸಕ್ತರು ಮೊ.ಸಂಖ್ಯೆ 9940469916 ಅಥವಾ 9448276944ಕ್ಕೆ ಸಂಪರ್ಕಿಸಬಹುದಾಗಿದೆ.
ಬೆಂಗಳೂರು: ನಿರ್ಮಾಣ್ ಯಕ್ಷ ಬಳಗವು ಇದೇ 28ರಂದು ಸಂಜೆ 5.30ಕ್ಕೆ ಕೋಣನಕುಂಟೆ ಕ್ರಾಸ್ ಬಳಿಯ ವಲ್ಲಭ ನಗರದಲ್ಲಿರುವ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ‘ಶ್ರೀಕೃಷ್ಣ ಸಂಧಾನ’ ಯಕ್ಷಗಾನ ತಾಳಮದ್ದಳೆ ಹಮ್ಮಿಕೊಂಡಿದೆ.
ಹಿಮ್ಮೇಳದಲ್ಲಿ ರಕ್ಷಿತ್ ಭಟ್ಟ ಮೂರೂರು, ಆಗ್ನೇಯ ಭಟ್ ಕ್ಯಾಸನೂರು, ನಾರಾಯಣ ಮೂರ್ತಿ ಹೊಸಬಾಳೆ, ಶ್ರೀರಮಣ ಭಟ್ಟ ಮೂರೂರು, ಮುಮ್ಮೇಳದಲ್ಲಿ ಶಿವಕುಮಾರ್ ಬೇಗಾರ್, ರವಿ ಐತುಮನೆ ಹಾಗೂ ಚಂದನ್ ಕಲಾಹಂಸ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.