ಬೆಂಗಳೂರು: ಸಾರಿಗೆ ಮುಷ್ಕರ 8ನೇ ದಿನವಾದ ಬುಧವಾರವೂ ಮುಂದುವರಿದ ಕಾರಣ, ಯುಗಾದಿ ಮುಗಿಸಿ ಬೆಂಗಳೂರಿಗೆ ಬಂದಿದ್ದ ಜನ ಮನೆ ತಲುಪಲು ಪರದಾಡಿದರು.
ಹಬ್ಬಕ್ಕೆ ಊರಿಗೆ ಹೋಗಲು ಪರದಾಡಿದ್ದ ಜನರು ವಾಪಸ್ ಬಂದಾಗಲೂ ಮನೆ ಸೇರಲು ಬಿಎಂಟಿಸಿ ಬಸ್ಗಳಿಗಾಗಿ ಕಾದರು. ಮುಷ್ಕರದ ನಡುವೆಯೂ ಅಲ್ಲಲ್ಲಿ ಬಿಎಂಟಿಸಿ ಬಸ್ಗಳು ಸಂಚರಿಸಿದವು.
ಊರಿನಿಂದ ಬಂದ ಕೆಲವರು ಆಟೋರಿಕ್ಷಾ ಮತ್ತು ಟ್ಯಾಕ್ಸಿಗಳಲ್ಲಿ ಮನೆ ಸೇರಿದರೆ, ಹಲವರು ಬೈಕ್ಗಳಿಗೆ ಕೈ ಒಡ್ಡಿ ಮನೆ ಸೇರಲು ಪ್ರಯತ್ನಿಸಿದರು. ಇನ್ನೂ ಹಲವರು ನಡೆದುಕೊಂಡೇ ಮನೆ ಸೇರಿದರು.
498 ಸಿಬ್ಬಂದಿ ಅಮಾನತು: ಈ ನಡುವೆ, ಸೋಮವಾರ 274 ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದ ಬಿಎಂಟಿಸಿ, ಬುಧವಾರ 224 ನೌಕರರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಸರ್ಕಾರ ಮುಷ್ಕರ ನಿಷೇಧಿಸಿದ್ದು, ಕಾನೂನುಬಾಹಿರವಾಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಏ.15ರೊಳಗೆ ಲಿಖಿತ ಸಮಜಾಯಿಷಿ ನೀಡದಿದ್ದರೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.