ADVERTISEMENT

ದಶಕಗಳ ನಂತರ ಕಾವೇರಿ ನೀರು ಸಂಪರ್ಕ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 15:08 IST
Last Updated 20 ಜೂನ್ 2020, 15:08 IST
ಆವಲಹಳ್ಳಿ ರಾಯಲ್ ಪಾರ್ಕ್‌ನ ಮನೆಗಳಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸಲು ನಿವಾಸಿಗಳಿಗೆ ನೀರಿನ ಮೀಟರ್‌ಗಳನ್ನು ಬಿಬಿಎಂಪಿ ಸದಸ್ಯ ಕೆ.ಸೋಮಶೇಖರ್ ವಿತರಿಸಿದರು
ಆವಲಹಳ್ಳಿ ರಾಯಲ್ ಪಾರ್ಕ್‌ನ ಮನೆಗಳಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸಲು ನಿವಾಸಿಗಳಿಗೆ ನೀರಿನ ಮೀಟರ್‌ಗಳನ್ನು ಬಿಬಿಎಂಪಿ ಸದಸ್ಯ ಕೆ.ಸೋಮಶೇಖರ್ ವಿತರಿಸಿದರು   

ಬೆಂಗಳೂರು: 20 ವರ್ಷಗಳಿಂದ ಕಾವೇರಿ ನೀರಿಗಾಗಿ ಕಾಯುತ್ತಿದ್ದ ರಾಯಲ್ ಪಾರ್ಕ್‍ನ ನಿವಾಸಿಗಳಲ್ಲಿ ಶನಿವಾರ ಸಂತಸ ಮನೆ ಮಾಡಿತ್ತು.

ಆವಲಹಳ್ಳಿ ರಾಯಲ್ ಪಾರ್ಕ್‍ನ ನಿವಾಸಿಗಳಿಗೆ ಕಾವೇರಿ ನೀರಿನ ಮೀಟರ್ ಅಳವಡಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದ ಬಿಬಿಎಂಪಿ ಸದಸ್ಯ ಕೆ. ಸೋಮಶೇಖರ್, ‘ಕಾವೇರಿ ನೀರು ಸರಬರಾಜು ಮಾಡಲು ತಾಂತ್ರಿಕ ತೊಂದರೆ ಎದುರಾಗಿತ್ತು. ಶಾಸಕ ಎಂ.ಕೃಷ್ಣಪ್ಪ ಅವರು ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ, ಸಮಸ್ಯೆ ಬಗೆಹರಿಸಿದ್ದಾರೆ’ ಎಂದರು.

‘ರಾಯಲ್‌ ಪಾರ್ಕ್‌ನಲ್ಲಿ 385 ಮನೆಗಳಿವೆ. ಈಗ ಕಾವೇರಿ ನೀರಿನ ಸಂಪರ್ಕ ಸಿಕ್ಕಿದ್ದು, ಕೃಷ್ಣಪ್ಪ ಅವರಿಗೆ ಮತ್ತು ಸರ್ಕಾರಕ್ಕೆ ನಿವಾಸಿಗಳ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ’ ಎಂದರು. ಚುಂಚಘಟ್ಟ ಸುಬ್ರಮಣಿ, ನಿವಾಸಿಗಳ ಸಂಘದ ಅಧ್ಯಕ್ಷ ಶ್ರೀಪತಿ ಇತರರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.